Advertisement

ಬೆಟ್ಟಿಂಗ್‌-ನಾಲ್ವರ ಬಂಧನ

02:12 PM Apr 07, 2022 | Team Udayavani |

ಬಳ್ಳಾರಿ: ನಗರದ ಕೋಟೆ ಪ್ರದೇಶದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿ ಸಿರುವ ಕೌಲ್‌ ಬಜಾರ್‌ ಪೊಲೀಸರು ಅವರಿಂದ 1,01,070 ರೂ ಮತ್ತು 4 ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ನಗರದ ಕೋಟೆ ಪ್ರದೇಶದ ಮಹ್ಮದ್‌ ಜುಬೇರ್‌ (22), ವೆಂಕಟರಮಣ ನಗರದ ಪ್ರಕಾಶ್‌ (27), ಕೃಷ್ಣ ಮೂರ್ತಿ (42) ಹಾಗೂ ಬಸವನಕುಂಟೆಯ ವಿಜಯ್‌ ಕುಮಾರ್‌ (22) ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಮಿಲ್ಲರ್‌ ಪೇಟೆಯ ರವಿ ಕಿರಣ್‌ (20) ತಲೆಮರೆಸಿಕೊಂಡಿದ್ದಾನೆ.

ಬಂಧಿತರಿಂದ ಜೂಜಾಟಕ್ಕೆ ಬಳಸಿದ ಐಸಿಐಸಿಐ ಬ್ಯಾಂಕ್‌ ಖಾತೆಯನ್ನು ಸಹ ಫ್ರೀಜ್‌ ಮಾಡಿಸಿದ್ದು ಈ ಖಾತೆಯಲ್ಲಿ 13 ಲಕ್ಷ ರೂ ಹಣ ಇದೆ. ಈ ಬಗ್ಗೆ ಕೌಲ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ಸೈದುಲು ಅಡಾವತ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next