Advertisement

ಹೊಸಬರ ಬೆಣ್ಣೆ ಗುಲ್ಕನ್‌!

11:47 AM Mar 02, 2022 | Team Udayavani |

ಈ ಹಿಂದೆ ಲವ್‌-ಕ್ರೈಂ ಕಥಾಹಂದರದ “ಮಹಿಷಾಸುರ’ ಚಿತ್ರವನ್ನು ನಿರ್ದೇಶಿಸಿದ್ದ ಉದಯ್‌ ಪ್ರಸನ್ನ ಈಗ “ಬೆಣ್ಣೆ ಗುಲ್ಕನ್‌’ ಎಂಬ ಮತ್ತೂಂದು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ.

Advertisement

“ನನ್ನ ಜೀವನದಲ್ಲಿ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ, ಅದಕ್ಕೆಒಂದಷ್ಟು ಕಮರ್ಷಿಯಲ್‌ ಅಂಶಗಳನ್ನ ಸೇರಿಸಿ, ವಿಭಿನ್ನ ಹಾಸ್ಯ ಶೈಲಿಯಲ್ಲಿ “ಬೆಣ್ಣೆ ಗುಲ್ಕನ್‌’ ಚಿತ್ರವನ್ನು ತೆರೆಮೇಲೆ ತರುತ್ತಿದ್ದೇವೆ’ ಎನ್ನುವುದು ಉದಯ್‌ ಪ್ರಸನ್ನ ಮಾತು.

ನವ ನಿರ್ಮಾಪಕ ಸಂದೀಪ್‌ ಬಸವರಾಜ್‌ “ಸಂಜೀವಿನಿ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಈಚಿತ್ರವನ್ನು ನಿರ್ಮಿಸುತ್ತಿದ್ದು, ಇದೇ ಮಾರ್ಚ್‌ 17ರಂದು ಪವರ್‌ಸ್ಟಾರ್‌ಪುನೀತ್‌ ರಾಜಕುಮಾರ್‌ ಅವರ ಹುಟ್ಟುಹಬ್ಬದಂದು “ಬೆಣ್ಣೆ ಗುಲ್ಕನ್‌’ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಸದ್ಯ “ಬೆಣ್ಣೆ ಗುಲ್ಕನ್‌’ ಚಿತ್ರದ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್‌ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಚಿತ್ರದ ಕಲಾವಿದರು, ತಂತ್ರಜ್ಞರ ಆಯ್ಕೆ ಅಂತಿಮ ಹಂತದಲ್ಲಿದೆ. ಚಿತ್ರಕ್ಕೆ ವಿರಾಟ್‌ ರಾಜ್‌ಮತ್ತು ಎಂ. ಜೆ ಮುದ್ದೇಗೌಡ ಸಂಭಾಷಣೆಯಿದೆ. “ಬೆಣ್ಣೆಗುಲ್ಕನ್‌’ನಲ್ಲಿ ಎರಡು ಹಾಡುಗಳು ಹಾಗೂ ಎರಡು ಸಾಹ ಸದೃಶ್ಯಗಳಿರಲಿದ್ದು, ಸುಮಾರು ಒಟ್ಟು 65 ದಿನಗಳು ಚಿತ್ರೀಕರಣ ಮಾಡುವ ಪ್ಲಾನ್‌ ಹಾಕಿಕೊಂಡಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next