Advertisement

Bengaluru: ಗೋದಾಮಿನ ಕ್ಯಾಮೆರಾ ಒಡೆದು, ಹಲ್ಲೆ: ಮೂವರ ಸೆರೆ

12:22 PM Oct 04, 2024 | Team Udayavani |

ಬೆಂಗಳೂರು: ಗೋದಾಮಿನ ಸಿಸಿ ಕ್ಯಾಮೆರಾ ಒಡೆದುಹಾಕಿ, ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಡಿಜಿ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸೈಯದ್‌ ಸಾತ್‌, ಉಸ್ಮಾನ್‌ ಖಾನ್‌ ಹಾಗೂ ಸಲ್ಮಾನ್‌ ಬಂಧಿತ ಆರೋಪಿಗಳು. ಸೆ.30ರಂದು ಶಾಂಪೂರದ ಮುನಿವೀರಪ್ಪ ಲೇಔಟ್‌ನ ಪಟೇಲಪ್ಪ ಆವರಣದಲ್ಲಿದ್ದ ಗೋದಾಮಿಗೆ ನುಗ್ಗಿದ ಐವರು ಆರೋಪಿಗಳು, ಮನೆಯ ಎದುರು ನಿಲುಗಡೆ ಮಾಡಿದ್ದ ಬೈಕ್‌ ಅನ್ನು ಕಳವು ಮಾಡಲು ಯತ್ನಿಸಿದ್ದರು. ಕೃತ್ಯ ಎಸಗುತ್ತಿದ್ದನ್ನು ಕಂಡ ಚಿನ್ಮಯಿ ಲೇಔಟ್‌ನ ಅರುಣ್‌ ಕುಮಾರ್‌ ಆರೋಪಿಗಳನ್ನು ಪ್ರಶ್ನಿಸಿದ್ದರು.

ಆಗ ಆರೋಪಿಗಳು ಬೈಕಿಗೆ ಬೆಂಕಿ ಹಚ್ಚುವುದಾಗಿ ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಗೋದಾಮಿನ ಬಳಿ ಬಿಬಿಎಂಪಿಯವರು ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದರು. ಸಾಲದಕ್ಕೆ ಅರುಣ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿದ್ದರು. ಅರುಣ್‌ ಕುಮಾರ್‌ ನೀಡಿದ ದೂರು ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next