Advertisement

Bengaluru: ವಾಹನ ಕಳ್ಳನ ಸೆರೆ: 17 ಬೈಕ್‌ಗಳು ಜಪ್ತಿ

01:05 PM Aug 10, 2024 | Team Udayavani |

ಬೆಂಗಳೂರು: ರಸ್ತೆ ಬದಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಹ್ಯಾಂಡ್‌ಲಾಕ್‌ ಮುರಿದು ಕಳ್ಳತನ ಮಾಡುತ್ತಿದ್ದ ಮೆಕ್ಯಾನಿಕ್‌ಯಲಹಂಕ ಉಪನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, 17.50 ಲಕ್ಷ ರೂ. ಮೌಲ್ಯದ 17 ದ್ವಿಚಕ್ರ ವಾಹನಗಳು, 2 ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ.

Advertisement

ನರಸಾ ಪುರ ಲೇಔಟ್‌ ನಿವಾಸಿ ಸಯ್ಯದ್‌ ಇರ್ಫಾನ್‌ (38) ಬಂಧಿತ.

ಯಲಹಂಕ ನ್ಯೂಟೌನ್‌ ವ್ಯಾಪ್ತಿಯ ವೀರಸಾಗರದಲ್ಲಿ ಗ್ಯಾರೇಜ್‌ ಇಟ್ಟುಕೊಂಡಿದ್ದ. ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹ್ಯಾಂಡ್‌ ಲಾಕ್‌ ಮುರಿದು ವಾಹನ ಸ್ಟಾರ್ಟ್‌ ಮಾಡುವ ತಂತ್ರ ಈತನಿಗೆ ಗೊತ್ತಿತ್ತು. ರಸ್ತೆಬದಿ ನಿಲುಗಡೆ ಮಾಡುವ ದ್ವಿಚಕ್ರ ವಾಹನ, ಆಟೋರಿಕ್ಷಾ ಹ್ಯಾಂಡ್‌ಲಾಕ್‌ ಮುರಿದು ಕಳ್ಳತನ ಮಾಡುತ್ತಿದ್ದ.

Advertisement

Udayavani is now on Telegram. Click here to join our channel and stay updated with the latest news.

Next