Advertisement

Bengaluru ನಗರ ಪಾಲಿಕೆ ವಿಭಜನೆ ಮತ್ತೆ ನನೆಗುದಿಗೆ: ವಿಭಜನೆಗೆ ವಿಪಕ್ಷ ಬಿಜೆಪಿ ವಿರೋಧ

01:09 AM Jul 26, 2024 | Team Udayavani |

ಬೆಂಗಳೂರು: ಗ್ರೇಟರ್‌ ಬೆಂಗಳೂರು ಮಸೂದೆಯ ಬಗ್ಗೆ ಅಧ್ಯಯನ ನಡೆಸಲು ವಿಧಾನ ಮಂಡಲದ ಜಂಟಿ ಸದನ ಸಮಿತಿ ರಚನೆ ಮಾಡುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಘೋಷಿಸಿದ್ದಾರೆ.

Advertisement

ಗುರುವಾರ ಈ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳುವಂತೆ ವಿಧಾನಸಭೆಯಲ್ಲಿ ಡಿ.ಕೆ. ಶಿವಕುಮಾರ್‌ ಪ್ರಸ್ತಾವಿಸಿದಾಗ ವಿಪಕ್ಷ ನಾಯಕ ಆರ್‌. ಅಶೋಕ್‌ ಹಾಗೂ ಬಿಜೆಪಿ ಶಾಸಕರು ಬಲವಾಗಿ ವಿರೋಧಿಸಿದರು.

ಆಡಳಿತ ಪಕ್ಷದ ಸದಸ್ಯರೂ ವೈಯಕ್ತಿಕವಾಗಿ ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಗಡಿಬಿಡಿಯ ನಿರ್ಣಯ ಬೇಡ ಎಂದಿದ್ದರು. ಸದನದ ಹೊರಗೆ ನಡೆದ ಸಂಧಾನ ಸಭೆಯಲ್ಲಿ ಸದನ ಸಮಿತಿ ರಚಿಸುವುದಾಗಿ ಸರಕಾರ ಭರವಸೆ ನೀಡಿತ್ತು.

ಹೀಗಾಗಿ ವಿಪಕ್ಷಗಳ ಸಲಹೆಯನ್ವಯ ಜಂಟಿ ಸದನ ಸಮಿತಿ ರಚನೆ ಮಾಡ ಲಾಗುವುದು ಎಂದು ಶಿವಕುಮಾರ್‌ ಘೋಷಿಸಿದರು.

ಬೆಂಗಳೂರು ಛಿದ್ರ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಅಧಿಕಾರಿಗಳು ನೀಡಿದ ವರದಿ ಆಧಾರದ ಮೇಲೆ ಅನುಷ್ಠಾನ ಮಾಡಬಾರದು.
-ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next