Advertisement

Bengaluru: ಹೀಲಿಯಂ ಗ್ಯಾಸ್‌ ಕುಡಿದು ಎಂಜಿನಿಯರ್‌ ಆತ್ಮಹತ್ಯೆ

12:49 AM Aug 21, 2024 | Team Udayavani |

ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರದ ಸಾಫ್ಟ್ವೇರ್‌ ಎಂಜಿನಿಯರ್‌ ಯಾಗ್ನಿಕ್‌ (24) ವೈಯಕ್ತಿಕ ವಿಚಾರಕ್ಕೆ ಮಂಗಳವಾರ ಮಧ್ಯಾಹ್ನ ಎಲೆಕ್ಟ್ರಾನಿಕ್‌ ಸಿಟಿಯ ನೀಲಾದ್ರಿ ರಸ್ತೆಯ ಹೊಟೇಲ್‌ನಲ್ಲಿ ಹೀಲಿಯಂ ಗ್ಯಾಸ್‌ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ.

Advertisement

ದೊಡ್ಡ ಪ್ಲಾಸ್ಟಿಕ್‌ ಕವರ್‌ನಲ್ಲಿ ಹೀಲಿಯಂ ಗ್ಯಾಸ್‌ ತುಂಬಿಕೊಂಡು ಮುಖ, ಕುತ್ತಿಗೆಯನ್ನು ತುರುಕಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು. ವೃತ್ತಿಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದ ಯಾಗ್ನಿಕ್‌, ವಿಪ್ರೋ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಕ್‌ ಫ್ರಂ ಹೋಂ ಇದ್ದ ಕಾರಣ ಸಕಲೇಶಪುರದ ತನ್ನ ಮನೆಯಿಂದಲೇ ಕೆಲಸ ಮಾಡುತ್ತಿದ್ದರು.

ಎಂ-ಟೆಕ್‌ ಪರೀಕ್ಷೆ ಬರೆಯಲು ಆ. 16ರಂದು ಬೆಂಗಳೂರಿಗೆ ಬಂದಿದ್ದು, ಹೊಟೇಲ್‌ನ ಕೊಠಡಿ ಯಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗೆ 11 ಗಂಟೆಗೆ ಕೊಠಡಿ ಖಾಲಿ ಮಾಡಬೇಕಿತ್ತು. ಅಪರಾಹ್ನ 12 ಗಂಟೆಯಾದರೂ ಆತ ಹೊರಗೆ ಬಾರದ ಕಾರಣ ಹೊಟೇಲ್‌ ಸಿಬಂದಿ ಬಾಗಿಲು ಬಡಿದರು. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮಾಸ್ಟರ್‌ ಕೀ ಬಳಸಿ ತೆರೆದಾಗ ಯಾಗ್ನಿಕ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತು. ಪೊಲೀಸರು ಪರಿಶೀಲಿಸಿದಾಗ ಹೀಲಿಯಂ ಸೇವಿಸಿ ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next