Advertisement

ಮಗುವನ್ನೇ ಬಾಲ್ಕನಿಯಿಂದ ಎಸೆದು ಕೊಲೆಗೈದ ತಾಯಿ: ಕಂದಮ್ಮನನ್ನು ಕಳೆದುಕೊಂಡು ಕಣ್ಣೀರಿಟ್ಟ ತಂದೆ

04:03 PM Aug 07, 2022 | Team Udayavani |

ಬೆಂಗಳೂರು : ಹೆತ್ತ ತಾಯಿಯೇ ತನ್ನ ಮಗುವನ್ನು 4ನೇ ಮಹಡಿಯಿಂದ ಎಸೆದು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಂದಮ್ಮನ ತಂದೆ ಮಗುವನ್ನು ನಾನೇ ನೋಡಿಕೊಳ್ಳುತ್ತಿದ್ದೆ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

Advertisement

ಮೃತ ಮಗುವಿನ ತಂದೆ ಶನಿವಾರ ಸಂಪಂಗಿರಾಮ ನಗರ ಠಾಣೆಗೆ ಹಾಜರಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಪತ್ನಿಗೆ ಮಗುವನ್ನು ನೋಡಿಕೊಳ್ಳುವುದು ಕಷ್ಟ ಆಗಿದ್ದರೆ ನಾನೇ ನೋಡಿಕೊಳ್ಳುತ್ತಿದ್ದೆ. ಕಟ್ಟಡದಿಂದ ಮಗುವನ್ನು ಎಸೆಯಲು ಅವಳಿಗೆ ಹೇಗೆ ಮನಸ್ಸು ಬಂತು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಕಿರಣ್‌ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

ಕಿರಣ್‌ ನೀಡಿದ ದೂರಿನ ಆಧಾರದ ಮೇರೆಗೆ ಅವರ ಪತ್ನಿ ಸುಷ್ಮಾ ವಿರುದ್ಧ ಸಂಪಂಗಿರಾಮನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಪಂಗಿ ರಾಮನಗರದಲ್ಲಿ ನೆಲೆಸಿದ್ದ ಸುಷ್ಮಾ ಮತ್ತು ಕಿರಣ್‌ ದಂಪತಿಗೆ ಒಂದು ಬುದ್ಧಿಮಾಂದ್ಯ ಮುದ್ದಾದ ಮಗುವಿತ್ತು. ಈ ಮಗುವನ್ನು ಕೊಲ್ಲಲು ನಿರ್ಧರಿಸಿ ಆಟ ಆಡಿಸಿ ಬರುತ್ತೇನೆ ಎಂದು ಹೇಳಿ ಎರಡನೇ ಮಹಡಿಯಿಂದ ನಾಲ್ಕನೇ ಮಹಡಿಗೆ ತೆರಳಿ ಮೇಲಿಂದ ಮಗುವನ್ನು ಕೆಳಗೆ ಎಸೆದು ವಿಕೃತಿ ಮೆರೆದಿದ್ದಳು.

ಇದನ್ನೂ ಓದಿ : ಎಸ್ಎಸ್ಎಲ್ ವಿ-ಡಿ1 ಬಳಸಲು ಸಾಧ್ಯವಿಲ್ಲ; ಶೀಘ್ರದಲ್ಲೇ ಮರಳಿ ಯತ್ನ: ಇಸ್ರೋ

Advertisement

Udayavani is now on Telegram. Click here to join our channel and stay updated with the latest news.

Next