Advertisement

Bengaluru: ಕಾರು ಚಾಲಕನಿಗೆ ಉಗಿದ ಆಟೋ ಚಾಲಕನ ಬಂಧನ

12:49 PM Aug 10, 2024 | Team Udayavani |

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನಿಗೆ ಉಗಿದು ಕಾರಿನ ಮಿರರ್‌ ಮುರಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆಟೋ ಚಾಲಕನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಯಮಲೂರು ನಿವಾಸಿ ಕಿರಣ್‌(34) ಬಂಧಿತ ಆಟೋ ಚಾಲಕ.

ಎಚ್‌ಎಎಲ್‌ ಮುಖ್ಯ ರಸ್ತೆಯ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ. ವಿಜ್ಞಾನನಗರ ನಿವಾಸಿ ಅಲೆಕ್ಸ್‌ ಬಾಬಿ ವೆಂಪಲ ಎಂಬುವರು ಈ ಬಗ್ಗೆ ದೂರು ನೀಡಿದದ್ದರು.ಅಲೆಕ್ಸ್‌ ಬಾಬಿ ತಮ್ಮ ಕಾರಿನಲ್ಲಿ ಎಚ್‌ಎಎಲ್‌ ಮುಖ್ಯರಸ್ತೆಯ ಜಂಕ್ಷನ್‌ ನಲ್ಲಿ ಹೋಗುತ್ತಿದ್ದರು. ಆ ವೇಳೆ ರಸ್ತೆ ಬದಿ ಆಟೋ ನಿಲ್ಲಿಸಿಕೊಂಡಿದ್ದ ಕಿರಣ್‌, ಶಾಲಾ ಮಕ್ಕಳನ್ನು ಕೆಳಗೆ ಇಳಿಸುತ್ತಿದ್ದ. ಈ ವೇಳೆ ಪಕ್ಕದಲ್ಲಿ ಬಂದ ಅಲೆಕ್ಸ್‌ ಕಾರನ್ನು ತಡೆದ ಆಟೋ ಚಾಲಕ ಕಿರಣ್‌, ಏಕಾಏಕಿ ಅಲೆಕ್ಸ್‌ ಬಾಬಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಮಿರರ್‌ ಮುರಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next