Advertisement

ಅಪ್ಪನಿಗೆ ದೂರು ಹೇಳಿದ ವ್ಯಕ್ತಿಯ ಕೊಂದ

10:38 AM Feb 12, 2023 | Team Udayavani |

ಬೆಂಗಳೂರು: ತನ್ನ ವಿರುದ್ಧ ತಂದೆಗೆ ದೂರು ಹೇಳುತ್ತಿದ್ದ ಪರಿಚಯಸ್ಥನನ್ನು ಯುವಕ ಕೊಲೆಗೈದಿರುವ ಘಟನೆ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ದೊಮ್ಮಸಂದ್ರ ಬಡಾವಣೆ ನಿವಾಸಿ ಮುನಿಯಪ್ಪ (45) ಕೊಲೆಯಾದವ. ಈ ಕೃತ್ಯ ಎಸಗಿದ ತರಕಾರಿ ಮಾರಾಟಗಾರ ಶ್ರೀಧರ್‌(25) ಎಂಬಾತನನ್ನು ಬಂಧಿಸಲಾಗಿದೆ.

ದೊಮ್ಮಸಂದ್ರದ ಬಡಾವಣೆ ನಿವಾಸಿಗಳಾಗಿರುವ ಮುನಿಯಪ್ಪ ಮತ್ತು ಶ್ರೀಧರ್‌ ಪರಸ್ಪರ ಪರಿಚಯಸ್ಥರಾಗಿದ್ದಾರೆ. ಮುನಿಯಪ್ಪ ಟೆಂಪೋ ಚಾಲಕನಾಗಿದ್ದರೆ, ಶ್ರೀಧರ್‌ ತರಕಾರಿ ಮಾರಾಟಗಾರನಾಗಿದ್ದ. ಈ ಮಧ್ಯೆ ಶ್ರೀಧರ್‌ ಮದ್ಯ ಸೇವನೆ ಹಾಗೂ ಇತರೆ ದುಶ್ಚಟಗಳಿಗೆ ದಾಸನಾಗಿದ್ದ. ಅದನ್ನು ಕಂಡ ಮುನಿಯಪ್ಪ, ಆತನ ತಂದೆಗೆ ತಿಳಿಸಿ, ಬುದ್ಧವಾದ ಹೇಳುವಂತೆ ಹೇಳಿದ್ದ. ಅದರಿಂದ ತಂದೆ ಮತ್ತು ಮಗನ ನಡುವೆ ಜಗಳ ನಡೆಯುತ್ತಿತ್ತು.

ಬಾರ್‌ನಲ್ಲಿ ಕೊಲೆ: ಶುಕ್ರವಾರ ತಡರಾತ್ರಿ ಶ್ರೀಧರ್‌ ಹಲಸಳ್ಳಿ ರಸ್ತೆಯಲ್ಲಿರುವ ಬಾರ್‌ಗೆ ಮದ್ಯ ಸೇವಿಸಲು ಹೋಗಿದ್ದನು. ಅದೇ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಶ್ರೀಧರ್‌ ಮುನಿಯಪ್ಪನನ್ನು ಗಮನಿಸಿ, ತನ್ನ ವಿರುದ್ಧ ತಂದೆಗೆ ಚಾಡಿ ಹೇಳುವ ವಿಚಾರ ಪ್ರಸ್ತಾಪಿಸಿ ಜಗಳ ತೆಗಿದ್ದಾನೆ. ಅದು ವಿಕೋಪಕ್ಕೆ ಹೋದಾಗ, ಶ್ರೀಧರ್‌ ಮಾರಕಾಸ್ತ್ರದಿಂದ ಮುನಿ ಯಪ್ಪನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ರಕ್ತಸ್ರಾವದಿಂದ ಬಿದ್ದಿದ್ದ ಮುನಿಯಪ್ಪನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು. ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next