Advertisement

ಕರ್ನಾಟಕದ ರಣಜಿ ಅಭಿಯಾನ ಅಂತ್ಯ: ಭರ್ಜರಿ ಜಯ ಸಾಧಿಸಿದ ಬಂಗಾಲ ಫೈನಲ್ ಪ್ರವೇಶ

10:02 AM Mar 04, 2020 | keerthan |

ಕೋಲ್ಕತ್ತಾ: ಈ ಋತುವಿನ ರಣಜಿ ಕೂಟದಲ್ಲಿ ಕರ್ನಾಟಕ ತಂಡದ ಅಭಿಯಾನ ಅಂತ್ಯವಾಗಿದೆ. ಸೆಮಿ ಫೈನಲ್ ನಲ್ಲಿ ಭರ್ಜರಿ ಜಯ ಸಾಧಿಸಿದ ಬಂಗಾಲ ತಂಡ ರಣಜಿ ಫೈನಲ್ ಪ್ರವೇಶಿಸಿದೆ.

Advertisement

ಮೂರನೇ ದಿನದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದ್ದ ರಾಜ್ಯ ತಂಡದ ಆಟಗಾರರು ಇಂದು ವಿಕೆಟ್ ಒಪ್ಪಿಸಲು ತುದಿಗಾಲಿನಲ್ಲಿ ನಿಂತಂತೆ ಆಡಿದರು. ಅಂತಿಮವಾಗಿ 177  ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಬಂಗಾಲ 174 ರನ್ ಜಯ ಸಾಧಿಸಿತು.

ಅರ್ಧಶತಕ ಸಿಡಿಸಿ ಕ್ರೀಸ್ ನಲ್ಲಿದ್ದ ದೇವದತ್ತ ಪಡಿಕ್ಕಲ್ 62 ರನ್ ಗಳಿಸಿ ಔಟಾದರು. ಉಳಿದಂತೆ  ಪಾಂಡೆ 12 ರನ್ ಗಳಿಸಿದರೆ ಕೆ.ಸಿದ್ದಾರ್ಥ ಮತ್ತು ಶ್ರೀನಿವಾಸ್ ಶರತ್ ಶೂನ್ಯ ಸುತ್ತಿದರು.

ಅಂತಿಮವಾಗಿ ಸೋಲು ಖಚಿತವಾದರೂ ಬ್ಯಾಟ್ ಬೀಸಿದ ಅಭಿಮನ್ಯು ಮಿಥುನ್ 38 ರನ್ ಗಳಿಸಿದರೆ, ಕೆ ಗೌತಮ್ 22 ರನ್ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next