Advertisement

ಕೇಂದ್ರಕ್ಕೆ 280 ಕೋಟಿ ಮನ್‌ರೇಗಾ ಮರಳಿಸುವುದಿಲ್ಲ: ಪ.ಬಂಗಾಲ ಸರಕಾರ

04:31 PM Aug 04, 2017 | Team Udayavani |

ಕೋಲ್ಕತ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸ್ವೀಕರಿಸಿದ 280 ಕೋಟಿ ರೂ.ಗಳನ್ನು ತಾನು ಕೇಂದ್ರಕ್ಕೆ ಮರಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಲ ಸರಕಾರ ಹೇಳಿದೆ. 

Advertisement

ಈ ಮೊತ್ತವನ್ನು ತಾನು ಗ್ರಾಮೀಣ ಭಾಗಗಳಲ್ಲಿ ಖಾಸಗೀ ಕೃಷಿ ಹೊಂಡಗಳ ನಿರ್ಮಾಣಕ್ಕೆ ಬಳಸಿದ್ದೇನೆ ಎಂದು ಪಶ್ಚಿಮ ಬಂಗಾಲ ಸರಕಾರ ಹೇಳಿದೆ. 

ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಲಾದ ಖಾಸಗಿ ಕೃಷಿ ಹೊಂಡಗಳು ಖಾಸಗೀ ಸೊತ್ತಲ್ಲ; ಅವುಗಳಲ್ಲಿ ಸಂಗ್ರಹವಾಗುವ ನೀರನ್ನು ಕೃಷಿ, ನೀರಾವರಿ ಮತ್ತು ಮನೆವಾರ್ತೆ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಕೇಂದ್ರ ಸರಕಾರಕ್ಕೆ ವಿವಿರಿಸ ಪತ್ರಬರೆಯಲಾಗಿದೆ ಎಂದು  ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಸುಬ್ರತಾ ಮುಖರ್ಜಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next