Advertisement

ಸಿಪಿಎಂ ಜತೆ ಸೀಟು ಹಂಚಿಕೆ: ರಾಹುಲ್‌ಗೆ ಬಂಗಾಲ ಕೈ ಮುಖ್ಯಸ್ಥ

11:01 AM Mar 05, 2019 | udayavani editorial |

ಕೋಲ್ಕತ : ಪಶ್ಚಿಮ ಬಂಗಾಲದಲ್ಲಿ  ಬಿಜೆಪಿ ನಡೆಯನ್ನು ತಡೆಯಲು ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯನ್ನು ಪದಚ್ಯುತಗೊಳಿಸಲು ಸಿಪಿಎಂ ಜತೆಗೆ ಸೀಟು ಹಂಚಿಕೆ ಅಥವಾ ಮೈತ್ರಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪಶ್ಚಿಮ ಬಂಗಾಲ ಕಾಂಗ್ರೆಸ್‌ ಮುಖ್ಯಸ್ಥ ಸೊಮೇನ್‌ ಮಿತ್ರ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

Advertisement

2019ರ ಲೋಕಸಭಾ ಚುನಾವಣೆಯನ್ನು ರಾಯಗಂಜ್‌ ಮತ್ತು ಮುರ್ಷಿದಾಬಾದ್‌ ಕ್ಷೇತ್ರಗಳಿಂದ ಪಕ್ಷವು ಸ್ಪರ್ಧಿಸಬೇಕೆಂಬುದು  ಕಾರ್ಯಕರ್ತರ ಮತ್ತು ನಾಯಕರ ಆಶೋತ್ತರವಾಗಿದೆ ಎಂದು ಮಿತ್ರ ಅವರು ತಮ್ಮ ಪತ್ರದಲ್ಲಿ ಬರೆದಿರವುದಾಗಿ ವರದಿ ತಿಳಿಸಿದೆ. 

ಈ ಎರಡು ಸೀಟುಗಳು ಸಿಪಿಎಂ ಮತ್ತು ಕಾಂಗ್ರೆಸ್‌ ನಡುವಿನ ಸೀಟು ಹಂಚಿಕೆ ಮಾತುಕತೆಯಲ್ಲಿ  ವಿವಾದಾತ್ಮಕ ವಿಷಯವಾಗಿ ಉಳಿದಿರುವುದು ಗಮನಾರ್ಹವಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next