Advertisement

ಪ.ಬಂ. ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಕಾರಿನ ಮೇಲೆ ಕಲ್ಲೆಸೆತ

12:34 PM Aug 09, 2018 | udayavani editorial |

ಕೋಲ್ಕತ : ಬಂಕುರಾ ಜಿಲ್ಲೆಯ ಖತ್ರಾ ಎಂಬಲ್ಲಿ ಅಪರಿಚಿತ ದುಷ್ಕರ್ಮಿಗಳು ಇಂದು ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಅವರ ಕಾರಿನ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ದಿಲೀಪ್‌ ಘೋಷ್‌ ಅವರು ನಿನ್ನೆ ಬುಧವಾರ ರಾತ್ರಿ ಪಕ್ಷ ಕಾರ್ಯಕರ್ತನ ಮನೆಯಲ್ಲಿ ಡಿನ್ನರ್‌ ಮುಗಿಸಿ ತಮ್ಮ ಹೊಟೇಲಿಗೆ ವಾಪಸಾಗುತ್ತಿದ್ದ ವೇಲೆ ಅವರ ಕಾರಿನ ಮೇಲೆ ಯಾರೋ ಕೆಲ ದುಷ್ಕರ್ಮಿಗಳು ಕಲ್ಲೆಸೆದು ದಾಳಿ ನಡೆಸಿದರು. 

ಶಾಸಕರಾಗಿರುವ ಘೋಷ್‌ ಅವರು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಳುವ ಟಿಎಂಸಿ ಪಕ್ಷದವರೇ ಈ ದಾಳಿ ನಡೆಸಿರಬೇಕೆಂದು ಬಿಜೆಪಿ ಆರೋಪಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next