Advertisement

Belthangady ಅಕ್ರಮವಾಗಿ 42 ಸಿಮ್‌ಕಾರ್ಡ್‌ ಖರೀದಿಸಿ ಸಿಕ್ಕಿಬಿದ್ದ ಯುವಕರು

10:11 PM Feb 04, 2024 | Team Udayavani |

ಬೆಳ್ತಂಗಡಿ: ಕುಟುಂಬದ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸಿಕೊಂಡು ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ ಐವರನ್ನು ಧರ್ಮಸ್ಥಳ ಪೊಲೀಸರು ರವಿವಾರ ಪತ್ತೆಹಚ್ಚಿದ್ದಾರೆ.

Advertisement

ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದಾನೆ. ಇಷ್ಟು ಸಂಖ್ಯೆಯ ಸಿಮ್‌ ಪಡೆದುಕೊಂಡಿರುವುದರ ಹಿಂದೆ ದುರುದ್ದೇಶವಿದೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

ವೃತ್ತಿಯಲ್ಲಿ ದುಬಾೖಯಲ್ಲಿ ಟ್ರೇಡಿಂಗ್‌ ಕೆಲಸ ಮಾಡುತ್ತಿದ್ದ ಬಿಕಾಂ ಪದವೀಧರ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಅಕ್ಬರ್ ಆಲಿ (24), ಬೆಳ್ತಂಗಡಿಯ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮನ್‌ ಆಗಿದ್ದ ಬೆಳ್ತಂಗಡಿ ಸಂಜಯನಗರದ ಮಹಮ್ಮದ್‌ ಮುಸ್ತಾಫಾ (22), ಬೆಂಗಳೂರಿನ ಎಂಪೈರ್‌ ರೆಸ್ಟೋರೆಂಟ್‌ ಕಂಪೆನಿಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿದ್ದ ಮುಂಡಾಜೆಯ ಸೋಮಂತ್ತಡ್ಕ ನಿವಾಸಿ, ಪ್ರಸಕ್ತ ನೆರಿಯ ಗುಂಪುಕಲ್ಲುವಿನಲ್ಲಿ ವಾಸವಿದ್ದ ರಮೀಝ್ (20), ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ಚಪ್ಪಲ್‌ ಲೈನ್‌ ಸೇಲ್‌ ಮಾಡುತ್ತಿದ್ದ ಪಡಂಗಡಿ ಗ್ರಾಮದ ಬದ್ಯಾರು ನಿವಾಸಿ ಮಹಮ್ಮದ್‌ ಸಾದಿಕ್‌ (27), ಉಜಿರೆ ಟಿಬಿ ಕ್ರಾಸ್‌ ಬಳಿ ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಕ (17)ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ವಿವರ
ಫೆ. 3ರಂದು ನೆರಿಯ ಗ್ರಾಮದ ತೋಟತ್ತಾಡಿಯಲ್ಲಿ ಐವರು ಅಪರಿಚಿತ ಯುವಕರು ವ್ಯವಹಾರಕ್ಕೆಂದು ಹೇಳಿ ಅಪರಿಮಿತ ಪ್ರಮಾಣದಲ್ಲಿ ಮೊಬೈಲ್‌ ಸಿಮ್‌ ಕಾರ್ಡ್‌ಗಳನ್ನು ಖರೀದಿಸಿ ಬೆಂಗಳೂರಿಗೆ ತೆರಳುತ್ತಿರುವ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ಬಂದಿತ್ತು.

ಕಾರ್ಯಪ್ರವೃತ್ತರಾದ ಎಸ್‌ಐ ಅನಿಲ್‌ ಕುಮಾರ್‌ ಡಿ. ಹಾಗೂ ಎಎಸ್‌ಐ ಸ್ಯಾಮುವೆಲ್‌ ಎಂ.ಐ. ಸಿಬಂದಿಗಳೊಂದಿಗೆ ಮುಂಜಾನೆ 4 ಗಂಟೆಗೆ ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಬಂದು ಪರಿಶೀಲಿಸಿದಾಗ ಐವರು ಯುವಕರು ಒಟ್ಟಾಗಿ ಇರುವುದು ಕಂಡುಬಂತು. ಪರಿಶೀಲಿಸಿದಾಗ ಅವರಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ 42 ಮೊಬೈಲ್‌ ಸಿಮ್‌ ಕಾರ್ಡ್‌ಗಳೂ ಪತ್ತೆಯಾದವು. ಅವರನ್ನು ವಶಕ್ಕೆ ಪಡೆಯಲಾಗಿದೆ.

Advertisement

ದುಬಾೖಯಲ್ಲಿ
ಬಳಕೆ ಉದ್ದೇಶ?
ಆರೋಪಿಗಳು ಯಾವುದೇ ಸಂಘಟನೆ ಅಥವಾ ಪಕ್ಷದಲ್ಲಿ ಭಾಗಿಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಅವರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಆರೋಪಿ ಅಕ್ಬರ್ ದುಬಾೖಯಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿನ ವ್ಯವಹಾರಕ್ಕೆ ಯುಪಿಐ ಐಡಿ ಆ್ಯಕ್ಟಿವೇಟ್‌ ಮಾಡಲು ದುಬಾೖಗೆ ಕೊಂಡೊಯ್ಯಲು ತನ್ನ ಸ್ನೇಹಿತರ ಮುಖಾಂತರ ಇಲ್ಲಿಂದ ಬೇರೆ ಬೇರೆ ಸಿಮ್‌ ಕಾರ್ಡ್‌ಗಳನ್ನು ಪಡೆದಿರುವುದಾಗಿ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ದುಬಾೖಯಲ್ಲಿ ಒಂದು ಸಿಮ್‌ ಕಾರ್ಡ್‌ನಲ್ಲಿ ಕನಿಷ್ಠ 20 ಸಾವಿರ ರೂ. ಮಾತ್ರ ವ್ಯವಹಾರಕ್ಕೆ ಅವಕಾಶ ಇರುವುದರಿಂದ ಹಲವು ಸಿಮ್‌ಗಳನ್ನು ಪಡೆದುಕೊಂಡಿರುವ ಸಾಧ್ಯತೆ ಕಂಡುಬಂದಿದೆ.

ಒಬ್ಬನ ಹೆಸರಿನಲ್ಲಿ 9 ಸಿಮ್‌ ಕಾರ್ಡ್‌ ಪಡೆಯಲು ಅವಕಾಶ ಇದ್ದು ಎಲ್ಲ ಆರೋಪಿಗಳು ತಮ್ಮ ತಮ್ಮ ಮನೆಯವರ ಹಾಗೂ ಸಂಬಂಧಿಗಳ ಹೆಸರಿನಲ್ಲಿ ಸ್ಥಳೀಯವಾಗಿಯೇ ಸಿಮ್‌ ಕಾರ್ಡ್‌ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಕುಟುಂಬದ 10 ಮಂದಿಯ ಆಧಾರ್‌ ಕಾರ್ಡ್‌ಗಳನ್ನು ನೀಡಿ ನೆರಿಯದ ಎರಡು ಮೊಬೈಲ್‌ ಅಂಗಡಿಗಳಿಂದ ಕ್ರಮವಾಗಿ 9 ಮತ್ತು 33 ಸಿಮ್‌ ಕಾರ್ಡ್‌ ಪಡೆದುಕೊಂಡಿದ್ದಾರೆ.ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next