Advertisement

Belthangady ದಾಖಲೆಗಳಿಲ್ಲದೆ ಅಡಿಕೆ ಸಾಗಾಟ; ಅಧಿಕಾರಿಗಳಿಂದ ದಂಡ

12:52 AM Mar 25, 2024 | Team Udayavani |

ಬೆಳ್ತಂಗಡಿ: ಪಿಕಪ್‌ ವಾಹನದಲ್ಲಿ ಯಾವುದೇ ಬಿಲ್‌/ ದಾಖಲೆಗಳಿಲ್ಲದೆ ಸುಲಿದ ಅಡಿಕೆಯನ್ನು ಸಾಗಾಟ ಮಾಡುತ್ತಿರುವುದನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದು, ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿ ವಾಹನ ಚಾಲಕನಿಗೆ ದಂಡ ವಿಧಿಸಿದ್ದಾರೆ.

Advertisement

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಸತ್ಯನಪಲ್ಕೆ ಸಿದ್ದಬೈಲು ಪರಾರಿ ಬಳಿ ಮಾ. 22ರ ಸಂಜೆ 5.30ರ ಸುಮಾರಿಗೆ ಪಿಕಪ್‌ ವಾಹನವನ್ನು ಪರಿಶೀಲನೆ ನಡೆಸಿದಾಗ ವಾಹನ ಕೆಟ್ಟು ಹೋಗಿದ್ದರಿಂದ ನಿಲ್ಲಿಸಿದ್ದಾಗಿಯೂ ವಾಹನದಲ್ಲಿ 200 ಕೆ.ಜಿ. ಸುಲಿದ ಒಣ ಅಡಿಕೆ ಸಾಗಾಟ ಮಾಡುತ್ತಿರುವುದಾಗಿಯೂ ವಾಹನ ಚಾಲಕ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ನಿವಾಸಿ ನಾಶಿಫ್‌ (23) ಎಂಬಾತ ತಿಳಿಸಿದ್ದನು.

ದಾಖಲೆಗಳನ್ನು ಕೇಳಿದಾಗ ಸಾಗಾಟ ಮಾಡಲು ಯಾವುದೇ ಬಿಲ್‌/ದಾಖಲೆ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದನು.

ಪ್ರಕರಣ ಸಂಬಂಧ ಎರಡು ಪಿಕಪ್‌ ವಾಹನ ಮತ್ತು ಸಾಗಾಟ ಮಾಡುತ್ತಿದ್ದ ಸುಲಿದ ಅಡಿಕೆಯನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಗೆ ಮುಂದಿನ ತನಿಖೆಗಾಗಿ ಹಸ್ತಾಂತರ ಮಾಡಲಾಗಿತ್ತು. ಅವರು 33,346 ರೂ. ದಂಡ ವಿಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next