Advertisement

ಹೊಸ ವಸ್ತ್ರ ನೆರೆ ಪಾಲಾದರೂ ನಿಶ್ಚಿತಾರ್ಥ ಸುಸೂತ್ರ

12:39 AM Aug 20, 2019 | Team Udayavani |

ಬೆಳ್ತಂಗಡಿ: ಹತ್ತು ದಿನಗಳ ಹಿಂದೆ ಭೀಕರ ಪ್ರವಾಹದಿಂದ ನೊಂದಿದ್ದ ಬೆಳ್ತಂಗಡಿಯ ಜನತೆ ನಿಧಾನ ವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮುಂಡಾಜೆ ಗ್ರಾಮದ ಸಂತ್ರಸ್ತ ಫ್ರಾನ್ಸಿಸ್‌ ಟಿ.ಪಿ. ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದ್ದು, ಅವರ ಪುತ್ರಿಯ ನಿಶ್ಚಿತಾರ್ಥ ಸೋಮವಾರ ನೆರವೇರಿದೆ.

Advertisement

ನೆರೆಯಿಂದ ಮುಂಡಾಜೆ ಗ್ರಾಮದ ನೂಜಿ ನಿವಾಸಿ ಫ್ರಾನ್ಸಿಸ್‌ ಅವರ ಮನೆ ಮತ್ತು ಕೃಷಿ ತೋಟಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಮೂರು ದನ ಸಾವಿಗೀಡಾಗಿದ್ದವು, ದಾಸ್ತಾನಿರಿ ಸಿದ್ದ ಎರಡು ಸಾವಿರ ತೆಂಗಿನಕಾಯಿ, ಸಹಿತ ಇತರ ಸೊತ್ತುಗಳಿಗೆ ಹಾನಿ ಯಾಗಿತ್ತು. ನಿಶ್ಚಿತಾರ್ಥಕ್ಕಾಗಿ ಮದು ಮಗಳು ಮತ್ತು ಮನೆಮಂದಿಗೆ ಖರೀದಿಸಿ ಇರಿಸಿದ್ದ 15 ಸಾವಿರ ರೂಪಾಯಿಗೂ ಅಧಿಕ ಮೌಲ್ಯದ ಬಟ್ಟೆಬರೆಗಳು ನೆರೆಯ ನೆರೆಪಾಲಾಗಿ ದ್ದವು. ನಿಶ್ಚಿತಾರ್ಥದ ಹೊತ್ತಿಗೆ ನೆರೆಯೂ ಅದರ ಆಘಾತವೂ ಇಳಿದು ಸರಳ ಸಂಭ್ರಮ ಮನೆ ಮಾಡಿದೆ. ಫ್ರಾನ್ಸಿಸ್‌ ಕುಟುಂಬ ಈಗ ಮದು ವೆಯ ಸಂಭ್ರಮದಲ್ಲಿದೆ.  ಪುತ್ರಿ ಶ್ವೇತಾಪಿ.ಎಸ್‌. ಅವರ ವಿವಾಹ ನಿಶ್ಚಿತಾರ್ಥವು ಆ.19ರಂದು ಮುಂಡಾಜೆ ಚರ್ಚ್‌ನಲ್ಲಿ ನಡೆದಿದ್ದು, ಆ.26ರಂದು ಬಂಟ್ವಾಳತಾಲೂಕಿನ ಮೂರ್ಜೆ ಚರ್ಚ್‌ನಲ್ಲಿ ಮದುವೆ ನೆರವೇರಲಿದೆ. ಪ್ರವಾಹದಿಂದ ತೊಂದರೆಯಾದ ಹಿನ್ನೆಲೆಯಲ್ಲಿ ನಿಶ್ಚಿತಾರ್ಥದಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಮನೆಯಲ್ಲಿ ತಯಾರಿಸ ಬೇಕಾಗಿದ್ದ ಅಡುಗೆಯನ್ನು ಕ್ಯಾಟರಿಂಗ್‌ನವರಿಗೆ ವಹಿಸಿದ್ದಾರೆ.

ಮಂಗಳೂರಿನ ಎ.ಜೆ. ಸಂಸ್ಥೆಯಲ್ಲಿ ಬಿಎಸ್‌ಸಿ ನರ್ಸಿಂಗ್‌ ವ್ಯಾಸಂಗ ಮಾಡುತ್ತಿರುವ ಶ್ವೇತಾ ಅವರ ವಿವಾಹವು ಕಳೆದ ಫೆಬ್ರವರಿಯಲ್ಲಿ ನಿಗದಿಯಾಗಿತ್ತು.

ನಿಶ್ಚಿತಾರ್ಥ ಮನೆಮಂದಿ ಮತ್ತು ಕುಟುಂಬದವರ ಸಮ್ಮುಖದಲ್ಲಿ ಅಂದುಕೊಂಡಂತೆ ಆತಂಕವಿಲ್ಲದೆ ನಡೆದಿದೆ. ನೆರೆಯಿಂದ ವಿದ್ಯುತ್‌ ಮತ್ತು ಕಟ್ಟಿಗೆ ಸಮಸ್ಯೆ ಆಗಿದ್ದರೂ ಅಡೆತಡೆ ಮೀರಿ ಸಂಭ್ರಮ ಮನೆಯಲ್ಲಿ ಮನೆಮಾಡಿತ್ತು. ದೇವರು ಇದೇ ರೀತಿ ಮದುವೆಯನ್ನೂ ನಡೆಸಿಕೊಡುತ್ತಾನೆ ಎಂಬ ವಿಶ್ವಾಸವಿದೆ.
– ಫ್ರಾನ್ಸಿಸ್‌ ಟಿ.ಪಿ.
ವಧುವಿನ ತಂದೆ

Advertisement

Udayavani is now on Telegram. Click here to join our channel and stay updated with the latest news.

Next