Advertisement

Belthangady: ನದಿಗೆ ಇಳಿದಿದ್ದ ವೃದ್ಧೆಯ ಮೃತ ದೇಹ ಪತ್ತೆ

08:02 PM Oct 01, 2024 | Team Udayavani |

ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟದಲ್ಲಿ ನದಿಗೆ ಸ್ನಾನಕ್ಕೆ ಇಳಿದಿದ್ದ ಬೆಂಗಳೂರಿನ ವೃದ್ಧೆಯೊಬ್ಬರು ನದಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ.

Advertisement

ಮೃತ ಮಹಿಳೆ ಬೆಂಗಳೂರು ರಾಜಾಜಿ ನಗರದ ನಿವಾಸಿ ರಾಜೇಶ್ವರಮ್ಮ (83) ಎಂಬವರಾಗಿದ್ದಾರೆ. ಅವರು ಸೆ.21ರಂದು ನದಿ ದಡದಲ್ಲಿ ಮೊಬೈಲ್‌ ಹಾಗೂ ಊರುಗೋಲನ್ನು ಇಟ್ಟು ಸ್ನಾನಕ್ಕೆಂದು ನದಿಗೆ ಇಳಿದಿದ್ದು, ನದಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಬಳಿಕ ಈಕೆಗಾಗಿ ಪೊಲೀಸರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದವರು ನದಿಯಲ್ಲಿ ಹುಡುಕಾಟ ನಡೆಸಿದಾಗ ಬೆಳಾಲು ಗ್ರಾಮದ ಅವೆಕ ಎಂಬಲ್ಲಿ ಸೋಮವಾರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.

ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next