Advertisement

ವಾಜಪೇಯಿ ಆದರ್ಶ ಚಿರಾಯುವಾಗಲಿ: ಪೂಂಜ

12:56 PM Aug 18, 2018 | Team Udayavani |

ಬೆಳ್ತಂಗಡಿ: ದೇಶಕಂಡ ಪ್ರಭಾವಿ ನಾಯಕರೆನಿಸಿಕೊಂಡಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರ ನಿಧನ ದೇಶಕ್ಕೆ ದುಃಖ ತಂದಿದೆ. ಸರ್ವ ಶಿಕ್ಷಾ ಅಭಿಯಾನದಂತಹ ಯೋಜನೆಗಳ ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಅವರ ಆದರ್ಶಗಳು ಶತಮಾನಗಳ ಕಾಲ ಚಿರಾಯುವಾಗಬೇಕು ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು. ಮಾಜಿ ಪ್ರಧಾನಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ಆ.16ರ ರಾತ್ರಿ ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ಮೊಂಬತ್ತಿ ಪ್ರದರ್ಶನದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು.

Advertisement

ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್‌ ಮಾತನಾಡಿ, ವಾಜಪೇಯಿ ಸರಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಜಾತಿ, ಮತಗಳನ್ನು ಮೀರಿದ ವ್ಯಕ್ತಿತ್ವ ಅವರದ್ದಾಗಿತ್ತು. ಜತೆಗೆ ಅನೇಕತೆಯಲ್ಲಿ ಏಕತೆ ಕಂಡಿದ್ದರು ಎಂದರು. ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ಭಟ್‌, ಬಿಜೆಪಿ ಮಂಡಲ ಕಾರ್ಯದರ್ಶಿಗಳಾದ ಸೀತಾರಾಮ ಬಿ.ಎಸ್‌. ಬೆಳಾಲು, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕೇಶವ ಅಜ್ಜಿನಡ್ಕ, ಉದ್ಯಮಿ ರಾಜೇಶ್‌ ಪ್ರಭು, ಲಾೖಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್‌ ಡೊಂಗ್ರೆ, ಜೇಸಿಐ ಅಧ್ಯಕ್ಷ ಕಿರಣ್‌ ಶೆಟ್ಟಿ, ಪುರುಷೋತ್ತಮ ಶೆಣೈ ಕಾತ್ಯಾಯಿನಿ, ಜಯಾನಂದ ಗೌಡ ಬೆಳ್ತಂಗಡಿ, ತುಕಾರಾಮ್‌, ಪ್ರಕಾಶ್‌ ಆಚಾರ್ಯ, ಶಶಿಧರ ಪೈ, ಶರತ್‌ ಬೆಳ್ತಂಗಡಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next