Advertisement

Belthangady: ಬಿಇಓ ಕಚೇರಿಯ ಪ್ರ.ದ.ಸ. ನಾರಾಯಣ್ ನಾಯ್ಕ ಪಿ. ನಿವೃತ್ತಿ: ಬೀಳ್ಕೊಡುಗೆ ಸಮಾರಂಭ

03:50 PM Dec 31, 2023 | Team Udayavani |

ಬೆಳ್ತಂಗಡಿ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಹಾಗೂ ಇತರ ಕೆಲ ಶಾಲೆಗಳಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದು, ಸೇರಿ  35 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ನಾರಾಯಣ್ ನಾಯ್ಕ ಅವರಿಗೆ ಡಿ.30 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧ್ಯಕ್ಷ ಶಿವಶಂಕ‌ರ್ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು.

ಟಿ. ಜಿ. ಟಿ. ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್‌ ಶೆಟ್ಟಿ, ಪ್ರಾ. ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕಿಶೋ‌ರ್, ಎನ್ ಪಿ ಎಸ್ ಸಂಘದ ಅಧ್ಯಕ್ಷ ಸುರೇಶ್ ಮಾಚಾರು, ತಾಲೂಕು ಪ್ರೌ.ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್‌ ತುಳಪುಳೆ, ಕಾರ್ಡಿನೇಟರ್ ಮೋಹನ್ ಕುಮಾ‌ರ್, ಕಾರ್ಯದರ್ಶಿ ಪ್ರಕಾಶ್‌, ಪ್ರೌ. ಶಾಲಾ ಸಹಶಿಕ್ಷಕರ ಅಧ್ಯಕ್ಷ ರಾಧಾಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರ. ದ. ಸ. ಪಡಂಗಡಿ ಶಾರದಾ ಭಟ್ ಪ್ರಾರ್ಥಿಸಿ, ಸುಧಾ ಸುರೇಶ್ ಸ್ವಾಗತಿಸಿದರು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸ. ಪ್ರೌ. ಶಾಲೆ ಪ್ರಕಾಶ್ ಬಿ. ಆರ್ ಧನ್ಯವಾದ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next