Advertisement

Belthangady ಅಪಘಾತದ ಗಾಯಾಳು ಸಾವು

01:10 AM Aug 10, 2024 | Team Udayavani |

ಬೆಳ್ತಂಗಡಿ: ಎರಡು ವರ್ಷಗಳ ಹಿಂದೆ ಬೈಕ್‌ ಅಪಘಾತಕ್ಕೊಳಗಾಗಿ ಸ್ಮರಣ ಶಕ್ತಿ ಕಳೆದುಕೊಂಡಿದ್ದ ತಾಲೂಕಿನ ಪಟ್ರಮೆಯ ಕಲ್ಲರಿಗೆ ಮನೆಯ ದಿ| ಸುಂದರ ದಾಸ್‌ ಅವರ ಪುತ್ರ ಸದಾಶಿವ ದಾಸ್‌ (34) ಅವರು ಅನಾರೋಗ್ಯದಿಂಂದಾಗಿ ಆ. 9ರಂದು ನಿಧನ ಹೊಂದಿದರು.

Advertisement

ಅವಿವಾಹಿತರಾಗಿದ್ದ ಅವರು ಸುಮಾರು 2 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಬೈಕ್‌ ಅಪಘಾತಕ್ಕೊಳಗಾಗಿ ತಲೆಗೆ ತೀವ್ರ ಏಟಾಗಿ ಸ್ಮರಣ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಇತ್ತೀಚೆಗೆ ಆರೋಗ್ಯ ತೀರಾ ಹದೆಗೆಟ್ಟು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ. 9ರಂದು ಮೃತಪಟ್ಟರು.
ಮೃತರು ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next