Advertisement

ಅಭಿವೃದ್ಧಿ ಯೋಜನೆ ಸಿದ್ಧಪಡಿಸಲು ಸೂಚನೆ

09:55 AM Jan 05, 2019 | |

ಬೆಳ್ತಂಗಡಿ: ಬೆಳ್ತಂಗಡಿ ನಗರ ಸನಿಹದ ಕಲ್ಲಗುಡ್ಡೆಯಲ್ಲಿ ಸುಮಾರು 25 ಎಕ್ರೆ ವಿಸ್ತೀರ್ಣದ ಟ್ರೀ ಪಾರ್ಕ್‌ಗೆ ಶುಕ್ರವಾರ ಶಾಸಕ ಹರೀಶ್‌ ಪೂಂಜ ಅವರು ಭೇಟಿ ನೀಡಿ, ಪಾರ್ಕ್‌ನ ಮುಂದಿನ ಅಭಿವೃದ್ಧಿ ಕುರಿತು ಯೋಜನೆ ಸಿದ್ಧಪಡಿಸಿ ನೀಡು ವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪ್ರಸ್ತುತ ಪಾರ್ಕಿನಲ್ಲಿ ವಾಕಿಂಗ್‌ ಟ್ರ್ಯಾಕ್‌, ಕುಳಿತುಕೊಳ್ಳುವ ವ್ಯವಸ್ಥೆ, ಕೊಳವೆಬಾವಿ, ಶೌಚಾಲಯಗಳಿದ್ದು, ರಸ್ತೆ, ನೀರಿನ ವ್ಯವಸ್ಥೆ ನಿರ್ಮಾಣವಾಗಬೇಕೆಂದು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ಸೂಕ್ತ ಅನು ದಾನದೊಂದಿಗೆ ಸುಸಜ್ಜಿತ ಪಾರ್ಕ್‌ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಬೆಳ್ತಂಗಡಿ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ಅವರು ಶಾಸಕರಿಗೆ ಮಾಹಿತಿ ನೀಡಿದರು. ಪ.ಪಂ. ಸದಸ್ಯರಾದ ಜಯಾನಂದ ಗೌಡ, ರಜನಿ ಕುಡ್ವ, ಅಂಬರೀಶ್‌, ಶರತ್‌ ಕುಮಾರ್‌, ತುಳಸಿ ಕರುಣಾಕರ್‌, ಗೌರಿ, ನಗರ ಬಿಜೆಪಿ ಅಧ್ಯಕ್ಷ ಭುಜಂಗ ಶೆಟ್ಟಿ, ಪ್ರಮುಖರಾದ ಗಣೇಶ್‌, ರಾಧಿಕಾ, ಜಯರಾಮ್‌, ಉಪ ಅರಣ್ಯಾಧಿಕಾರಿ ರವೀಂದ್ರ ಅಂಕಲಗಿ, ರಾಘವೇಂದ್ರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next