Advertisement

ನೆರಿಯದಲ್ಲಿ ಒಂಟಿ ಸಲಗದ ವಿಹಾರ! ಜೀವ ಭಯದಲ್ಲಿ ಊರಿನ ಜನ

12:26 AM Dec 13, 2022 | Team Udayavani |

ಬೆಳ್ತಂಗಡಿ : ತಾಲೂಕಿನ ಅರಣ್ಯಭಾಗದ ಊರುಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆಯ ಕಾರ್ಯಾಚರಣೆಯ ನಡುವೆಯೇ ಸೋಮವಾರ ಬೆಳಗ್ಗೆ ನೆರಿಯ ಗ್ರಾಮದ ಅಣಿಯೂರು ಪೇಟೆಯ ಪ್ರದೇಶದಲ್ಲೇ ಒಂಟಿ ಸಲಗ ವಿಹರಿಸುವ ಮೂಲಕ ಜನರನ್ನು ಭಯಬೀತಗೊಳಿಸಿದೆ.

Advertisement

ತೋಟತ್ತಾಡಿಯ ಬಾರೆ ಪ್ರದೇಶದಲ್ಲಿ ರವಿವಾರ ರಾತ್ರಿ ಗಸ್ತು ನಿರತ ತಂಡಕ್ಕೆ ಒಂಟಿ ಸಲಗ ಎದುರಾಗಿದ್ದು, ಪಟಾಕಿ ಸಿಡಿಸುವ ಮೂಲಕ ಕಾಡಿಗೆ ಅಟ್ಟಲಾಗಿತ್ತು. ಸೋಮವಾರ ಬೆಳಗ್ಗೆ 6.45ರ ಸುಮಾರಿಗೆ ಇಲ್ಲಿಂದ ಸುಮಾರು ಏಳೆಂಟು ಕಿ.ಮೀ. ದೂರದ ನೆರಿಯ ಗ್ರಾಮದ ಅಣಿಯೂರುಪೇಟೆ ಸಮೀಪದ ಸೇತುವೆಯ ಕೆಳಗೆ ಆನೆ ಓಡಾಡುತ್ತಿರುವುದು ಕಂಡುಬಂದಿತು. ಇದರ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ.

ಆನೆ ಓಡಿಸಲು ಪಟಾಕಿ ಕೊರತೆ
ತೋಟತ್ತಾಡಿ, ಬಾರೆ, ಕುಂಟಾಡಿ, ಅಗರಿ ಕುಕ್ಕಾಜೆ, ಮುದ್ದಿನಡ್ಕ ಮೊದಲಾದೆಡೆ ಕಾಡಾನೆಗಳು ಕೃಷಿ ನಾಶ ಮಾಡುತ್ತಿವೆ. ಆನೆ ಓಡಿಸಲು ಅರಣ್ಯ ಇಲಾಖೆಯಲ್ಲಿರುವ ಪಟಾಕಿ ದಾಸ್ತಾನು ಸಾಲುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next