Advertisement

ಬೆಳ್ತಂಗಡಿ: ಎರಡು ಮನೆಗಳಿಗೆ ಹಾನಿ

10:02 AM Aug 13, 2018 | Team Udayavani |

ಬೆಳ್ತಂಗಡಿ: ತಾಲೂಕಿನಾದ್ಯಂತ ರವಿವಾರ ಧಾರಾಕಾರ ಮಳೆಯಾಗಿದ್ದು, ಬೆಳ್ತಂಗಡಿ ನಗರದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಹಳೆಕೋಟೆ ನಿವಾಸಿ ಹರೀಶ ಹಾಗೂ ಕಲ್ಕಣಿ ಪರಿಶಿಷ್ಟ ಜಾತಿ ಕಾಲನಿ ನಿವಾಸಿ ಕೃಷ್ಣ ಅವರ ಮನೆಯ ಒಂದು ಬದಿಯ ಗೋಡೆ ಕುಸಿದು, ಮನೆ ಅಪಾಯದ ಸ್ಥಿತಿಗೆ ತಲುಪಿದೆ.


ಹರೀಶ ಅವರ ಕುಟುಂಬವನ್ನು ಸ್ಥಳಾಂತರಿಸಲಾಗಿದ್ದು, ದಸಂಸ ಮುಖಂಡರಾದ ಬಿ.ಕೆ. ವಸಂತ್‌, ಪ್ರಮೋದ್‌, ರಮೇಶ್‌ ಅವರು ಸ್ಥಳಾಂತರ ಕಾರ್ಯಕ್ಕೆ ನೆರವು ನೀಡಿದರು. ಗ್ರಾಮ ಕರಣಿಕ ಮಹೇಶ್‌, ಸಹಾಯಕ ಸತೀಶ್‌ ಹೆಗ್ಡೆ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

ತಾಲೂಕಿನ ಎಲ್ಲೆಡೆ ರವಿವಾರ ಬಿರುಸಿನ ಮಳೆಯಾಗಿದ್ದು, ಗಾಳಿಯ ಅಬ್ಬರವೂ ಜೋರಾಗಿತ್ತು. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next