Advertisement

ಬೆಳ್ಮಣ್‌: ಅನಾರೋಗ್ಯ ಪೀಡಿತನ ವೈದ್ಯಕೀಯ ನೆರವಿಗಾಗಿ ಯಕ್ಷಗಾನ

12:30 AM Mar 23, 2019 | Team Udayavani |

ಬೆಳ್ಮಣ್‌: ಸೊÌàದ್ಯೋಗದ ಮೂಲಕ ಜೀವನ ಸಾಗಿಸುತ್ತಿದ್ದ ಕುಂಟಾಡಿಯ ಸುಧೀರ್‌ ಎಂಬವರು ಅನಾರೋಗ್ಯ ಪೀಡಿತರಾದ ಹಿನ್ನೆಲೆಯಲ್ಲಿ  ಅವರ ವೈದ್ಯಕೀಯ ನೆರವು ಮತ್ತು ಅವರ ಮಕ್ಕಳ ಶೈಕ್ಷಣಿಕ ನೆರವಿಗಾಗಿ ಪಳ್ಳಿ-ನಿಂಜೂರು ಯಕ್ಷ ಮಿತ್ರರು ಬಪ್ಪನಾಡು ಮೇಳದ ಯಕ್ಷಗಾನ ಆಡಿಸಿ ಧನಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.

Advertisement

ಯಕ್ಷಮಿತ್ರರ ಈ ಬಳಗ ಈ ಹಿಂದೆಯೂ ಹಲವಾರು ಮಾನವೀಯ ಮೌಲ್ಯದ ಕಾರ್ಯಗಳನ್ನು ಮಾಡಿದ್ದು ಈ ಬಾರಿ ಪಳ್ಳಿಯಲ್ಲಿ ಆಡಿಸಿದ ಆಟದಲ್ಲಿ ಉಳಿಕೆಯಾದ 25000 ರೂ. ಗಳನ್ನು ಸುಧೀರ್‌ರವರಿಗೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.

ಯಕ್ಷಮಿತ್ರರ ಯಕ್ಷಗಾನ ಪ್ರೇಮದ ಜತೆ ಸಾಮಾಜಿಕ ಕಳಕಳಿಯ ಈ ಚಿಂತನೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next