Advertisement

ಬೆಳ್ಮಣ್‌: ಜಲ ಮರುಪೂರಣ ಘಟಕ ಉದ್ಘಾಟನೆ

10:49 PM Jul 02, 2019 | Team Udayavani |

ಬೆಳ್ಮಣ್‌: ಮುಂದಿನ ಪೀಳಿಗೆಗೆ ನೀರು ಉಳಿಸುವ ಬದಲು ನಮ್ಮ ಜೀವಿತಾವಧಿಯಲ್ಲಿಯೇ ನೀರಿನ ಅಭಾವ ಎದರಾಗಿದ್ದು ಅಂತರ್ಜಲ ಸಂರಕ್ಷಣೆಯೊಂದೇ ಇದಕ್ಕೆ ಪರಿಹಾರ ಎಂದು ನಿವೃತ್ತ ಶಿಕ್ಷಕ ಎನ್‌. ತುಕಾರಾಮ ಶೆಟ್ಟಿ ಹೇಳಿದರು.

Advertisement

ಸೋಮವಾರ ಬೆಳ್ಮಣ್‌ ಅಬ್ಬನಡ್ಕ ಬೆನಕ ಭಾಸ್ಕರ ಶೆಟ್ಟಿ ಅವರ ನಿವಾಸದಲ್ಲಿ ಕೊಳವೆ ಬಾವಿಯ ಜಲ ಮರುಪೂರಣ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳ್ಮಣ್‌ ವಲಯ ಪತ್ರಕರ್ತರ ಬಳಗ, ಜೇಸಿಐ ಹಾಗೂ ಇತರ ಜಲಪ್ರೇಮಿಗಳ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೂಡಾ ರಮಾನಾಥ ಶೆಟ್ಟಿ ಜಲ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್‌ ಸದಸ್ಯರಾದ ಶಿವಪ್ರಸಾದ್‌ ದೇವಾಡಿಗ, ಗೀತಾ ಚಂದ್ರಶೇಖರ್‌, ಅನಿತಾ ಡಿ’ಸೋಜಾ, ಜೇಸಿ ಅಧ್ಯಕ್ಷೆ ಶ್ವೇತಾ ಸುಭಾಷ್‌, ಅಬ್ಬನಡ್ಕ ರಾಜೇಶ್‌ ಪೂಜಾರಿ, ಬೆನಕ ಬಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.

ಕಾಮಗಾರಿಯ ನಿರ್ವಾಹಕ ಕಾಂಜರ ಕಟ್ಟೆ ದೀಪಕ್‌ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next