Advertisement

ಭಕ್ತಿ ಭಾವಗಳಿಂದ ಸಂಪನ್ನಗೊಂಡ ಬೆಳ್ಳೂರು ಮಹಾವಿಷ್ಣು ದೇವಳ ಪ್ರತಿಷ್ಠಾ ವರ್ಧಂತಿ

05:00 PM May 05, 2019 | Hari Prasad |

ಬದಿಯಡ್ಕ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಳದ ತೃತೀಯ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.

Advertisement

ಪ್ರತಿಷ್ಠಾ ವರ್ಧಂತಿ ಅಂಗವಾಗಿ ಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹೋಮ, ಬೆಳ್ಳೂರು ಲಕ್ಷ್ಮಿ ಪಾರ್ವತಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ಬೆಳ್ಳೂರು ಶ್ರೀ ಮಹಾವಿಷ್ಣು ಭಜನ ಸಂಘದಿಂದ ಭಕ್ತಿ ಗೀತಾರಾಧನೆ, ರಾತ್ರಿ ದುರ್ಗಾಪೂಜೆ, ದುರ್ಗಾ ಹೋಮ, ವಸಂತ ಪೂಜೆ ನಡೆಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ರವೀಶ ತಂತ್ರಿ ಕುಂಟಾರು ಅವರು ಉದ್ಘಾಟಿಸಿದರು. ದೇವಸ್ಥಾನದ ಅಧ್ಯಕ್ಷರಾದ ಗಂಗಾಧರ ಬಲ್ಲಾಳ್‌ ಎ.ಬಿ. ಅಧ್ಯಕ್ಷತೆ ವಹಿಸಿದರು. ಅನುವಂಶಿಕ ಮೊಕ್ತೇಸರರಾದ ರಾಧಾಕೃಷ್ಣ ಕಡಂಬಳಿತ್ತಾಯ, ಧಾರ್ಮಿಕ ಮುಖಂಡರಾದ ಕಲ್ಲಗ ಚಂದ್ರಶೇಖರ ರಾವ್‌, ನಿವೃತ್ತ ಮುಖ್ಯ ಶಿಕ್ಷಕಿ ಪ್ರೇಮ ಕಲ್ಲೂರಾಯ, ಮಿತ್ರ ಬೆಳ್ಳೂರು ಅಧ್ಯಕ್ಷ ಸುಂದರಾಜ್‌ ಪಂಬುಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next