Advertisement

ನ್ಯಾಯಾಧೀಶರ ವಸತಿಗೃಹದಲ್ಲಿ ಪರಿಸರ ದಿನಾಚರಣೆ

12:41 PM Jun 06, 2020 | Naveen |

ಬಳ್ಳಾರಿ: ವಿಶ್ವ ಪರಿಸರ ದಿನಾಚರಣೆ ಹಾಗೂ ಜೈವಿಕ ವೈವಿಧ್ಯತೆ ದಿನದ ಅಂಗವಾಗಿ ನಗರದ ನ್ಯಾಯಾಧೀಶರ ವಸತಿಗೃಹದ ಆವರಣದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧಿಧೀಶರಾದ ಕೃಷ್ಣ ಬಿ.ಅಸೋಡೆ ಅವರು ಸಸಿಗಳನ್ನು ನೆಟ್ಟರು.

Advertisement

ನ್ಯಾ. ಕೃಷ್ಣ ಅಸೋಡೆ ಅವರು ಪರಿಸರದ ಪ್ರಾಮುಖ್ಯತೆಯನ್ನು ಈ ಸಂದರ್ಭದಲ್ಲಿ ವಿವರಿಸಿದರು. ಅದೇ ರೀತಿ ಉಪಸ್ಥಿತರಿದ್ದ ಇನ್ನಿತರ ನ್ಯಾಯಾಧಿಧೀಶರು ಸಹ ಸಸಿಗಳನ್ನು ನೆಟ್ಟರು. ಪರಿಸರ ಸಂರಕ್ಷಣೆ ಕಾಪಾಡುವ ಕುರಿತು ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಅರ್ಜುನ್‌ ಮಲ್ಲೂರು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್‌.ಬಿ.ಬೋಗಿ, ಪರಿಸರ ಅಧಿಕಾರಿ ಉಮಾಶಂಕರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್‌.ಎಂ. ಅಂಕಲಯ್ಯ, ಕಾರ್ಯದರ್ಶಿ ಎಸ್‌.ಸಿ. ಅರಸೂರು ಸೇರಿದಂತೆ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next