Advertisement

Bellary; ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿಜಯಲಕ್ಷ್ಮಿ, ನಟ ಧನ್ವೀರ್‌, ಹೇಮಂತ್

06:04 PM Sep 17, 2024 | |

ಬಳ್ಳಾರಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ, ಆರೋಪಿ ದರ್ಶನ್‌ ಅವರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ಆಪ್ತರು ಮಂಗಳವಾರ (ಸೆ.17) ಭೇಟಿಯಾದರು.

Advertisement

ಸಂಜೆ 4.05ಕ್ಕೆ ವಿಜಯಲಕ್ಷ್ಮಿ ಮತ್ತು‌ ದರ್ಶನ್ ಆಪ್ತರು ಜೈಲಿಗೆ ಆಗಮಿಸಿದರು. ವಿಜಯಲಕ್ಷ್ಮಿ ಅವರೊಂದಿಗೆ ನಟ ಧನ್ವಿರ್ ಮತ್ತು ದರ್ಶನ್ ಆಪ್ತ ಹೇಮಂತ್ ಆಗಮಿಸಿದರು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ‌ ದರ್ಶನ್‌ ಆಪ್ತರಿಗೆ ಭೇಟಿಗೆ ಅವಕಾಶ ನೀಡಲಾಗಿದೆ. ಈವರೆಗೆ ಕೇವಲ‌ ರಕ್ತ ಸಂಬಂಧಿಗಳಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿತ್ತು. ಇದೀಗ ಸ್ನೇಹಿತರಿಗೆ ಅವಕಾಶ ನೀಡಲು ದರ್ಶನ್ ವಕೀಲರು ಬೆಂಗಳೂರು ನ್ಯಾಯಾಲಯದಿಂದ ಅನುಮತಿ‌ ಪಡೆದಿದ್ದಾರೆ.

ನ್ಯಾಯಾಲಯದ ಅನುಮತಿ ನೀಡಿದ ಮೇಲೆ ಧನ್ವೀರ್‌ ಮತ್ತು ಹೇಮಂತ್ ಭೇಟಿ ನೀಡಿದ್ದಾರೆ. ಜಾಮೀನಿಗೆ ಅರ್ಜಿ‌ ಸಲ್ಲಿಸುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಜೈಲ್ ಸಿಬ್ಬಂದಿಗಳು ಮೊದಲು ಆತಂರಿಕ ಭದ್ರತಾ ಪಡೆಯಿಂದ ಪರಿಶೀಲಿಸಿ ನಂತರ ಅವರನ್ನು ಒಳಗಡೆ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next