Advertisement

Bellary Jail; ದರ್ಶನ್ ವೈದ್ಯಕೀಯ ಪರೀಕ್ಷೆ ಮುಂದಾದ ಜೈಲಾಧಿಕಾರಿಗಳು

12:26 PM Sep 01, 2024 | Team Udayavani |

ಬಳ್ಳಾರಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿರುವ ಆರೋಪಿ, ನಟ ದರ್ಶನ್‌ ಗೆ (Darshan) ಇದೀಗ ವೈದ್ಯಕೀಯ ಪರೀಕ್ಷೆ ನಡೆಸಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.

Advertisement

ಬಳ್ಳಾರಿ ಜೈಲಿಗೆ ಶಿಫ್ಟ್‌ ಆದ ಬಳಿಕ ನಟ ದರ್ಶನ್‌ ಅವರು ತನಗೆ ಬೆನ್ನು ನೋವಿದೆ, ಹೀಗಾಗಿ ಭಾರತೀಯ ಶೈಲಿಯ ಶೌಚಾಲಯದಲ್ಲಿ ಬಹಿರ್ದೆಸೆಗೆ ತೆರಳಲು ಕಷ್ಟವಾಗುತ್ತದೆ ಎಂದು ಡಿಐಜಿ ಮುಂದೆ ಅವಲತ್ತುಕೊಂಡಿದ್ದರು.

ಹೀಗಾಗಿ ಸರ್ಜಿಕಲ್ ಚೇರ್ ಗಾಗಿ ಮನವಿ ಮಾಡಿದ್ದರು. ಈ ಬಗ್ಗೆ ಮೆಡಿಕಲ್ ರಿಪೋರ್ಟ್ ಬೇಕು ಎಂದು ಡಿಐಜಿ ಹೇಳಿದ್ದರು. ಹೀಗಾಗಿ ದರ್ಶನ್ ಕುಟುಂಬಸ್ಥರು ಶನಿವಾರ ರಾತ್ರಿ ಮೆಡಿಕಲ್ ರಿಪೋರ್ಟ್ ಸಲ್ಲಿಸಿದ್ದರು.

ಹೀಗಾಗಿ ಜೈಲಾಧಿಕಾರಿಗಳು ಇದೀಗ ದರ್ಶನ್ ವೈದ್ಯಕೀಯ ಪರೀಕ್ಷೆ ಮುಂದಾಗಿದ್ದಾರೆ. ಜೈಲು ಡಾಕ್ಟರ್ ಮೂಲಕ ದರ್ಶನ ವೈದ್ಯಕೀಯ ರಿಪೋರ್ಟ್ ಪರಿಶೀಲನೆ ನಡೆಸಲಾಗುತ್ತದೆ. ಬೆನ್ನು ನೋವಿನ ತೀವ್ರತೆ ಬಗ್ಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಬೆನ್ನು ನೋವಿಗಾಗಿ ಸರ್ಜಿಕಲ್ ಚೇರ್‌ ಅನಿವಾರ್ಯವಾದರೆ ಅದನ್ನು ನೀಡಲಾಗುತ್ತದೆ.

Advertisement

ಸಮಾನ್ಯ ಕೈದಿಯ ರೀತಿಯಂತೆ ದರ್ಶನ್‌ ಗೂ ಟ್ರೀಟ್ಮೆಂಟ್ ನೀಡಲಾಗುತ್ತಿದೆ.  ಕೆಲವು ಮಾತ್ರೆಗಳನ್ನು ನೀಡುವಂತೆ ದರ್ಶನ್ ಮನವಿ ಮಾಡಿದ್ದಾರೆ. ಸರ್ಕಾರಿ ಮೆಡಿಸಿನ್ ಮಾತ್ರ ನೀಡಲಾಗುವುದು ಎಂದು ಜೈಲಾಧಿಕಾರಿಗಳು ಈಗಾಗಲೇ ದರ್ಶನ್‌ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next