Advertisement

ಕರ್ಬೂಜ ಜನರಿಗೆ ದಾನ ಮಾಡಿದ ಕೃಷಿಕ

12:30 PM Apr 11, 2020 | Naveen |

ಬಳ್ಳಾರಿ: ಕೊರೊನಾ ವೈರಸ್‌ ಭೀತಿಯಿಂದಾಗಿ ಮಾರುಕಟ್ಟೆ ವ್ಯವಸ್ಥೆ ಸಿಗದೆ ಹೊಲದಲ್ಲೇ ನಷ್ಟಕ್ಕೀಡಾಗುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಕಬೂìಜ ಹಣ್ಣನ್ನು ರೈತರೊಬ್ಬರು ಸಾರ್ವಜನಿಕರಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಸಂಡೂರು ತಾಲೂಕು ಕೊಡಾಲು ಗ್ರಾಮದ ತಿಮ್ಮನಗೌಡ ಹಣ್ಣನ್ನು ದಾನ ಮಾಡಿದ ರೈತ. ಗ್ರಾಮದ 8 ಎಕರೆ ಪ್ರದೇಶದಲ್ಲಿ ಕರ್ಬೂಜ ಹಣ್ಣನ್ನು ಬೆಳೆದಿದ್ದನು.

Advertisement

ಇಳುವರಿ ಉತ್ತಮವಾಗಿ ಬಂದಿದ್ದರೂ, ಕೊರೊನಾ ವೈರಸ್‌ ಆವರಿಸಿದ್ದ ಪರಿಣಾಮ ಲಾಕ್‌ಡೌನ್‌ ವಿಧಿಸಿದ್ದು, ಹಣ್ಣುಗಳನ್ನು ಮಾರಲು ಮಾರುಕಟ್ಟೆಯೇ ಇಲ್ಲವಾಗಿದ್ದು, ಹಣ್ಣುಗಳನ್ನು ಖರೀದಿ ಮಾಡಲು ವರ್ತಕರು ಸಹ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಹಾಗಾಗಿ ಹಣ್ಣುಗಳು ಹೊಲದಲ್ಲೇ ಬಿಸಿಲಿಗೆ ಕೊಳೆತು ಹೋಗುವ ಬದಲಿಗೆ ಸಮೀಪದ ಗ್ರಾಮಗಳಲ್ಲಿ ಮನೆಮನೆಗೆ ಕೊಂಡೊಯ್ದು ದಾನ ಮಾಡುತ್ತಿದ್ದಾರೆ. ಈ ಮೂಲಕ ಲಾಕ್‌ಡೌನ್‌ ದಿನಗಳಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಜನರಿಗೂ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಕೊಡಾಲು ಗ್ರಾಮದಲ್ಲಿ 8 ಎಕರೆ ಪ್ರದೇಶದಲ್ಲಿ ಕಬೂìಜ ಹಣ್ಣನ್ನು ಬೆಳೆಯಲಾಗಿದೆ. ಇದಕ್ಕಾಗಿ 10 ಲಕ್ಷ ರೂ. ಸಾಲ ಮಾಡಿದ್ದೇನೆ. ಉತ್ತಮ ಇಳುವರಿ ಬಂದಿದ್ದು, ಫಸಲು ಕೈಗೆ ಬಂದಿದೆ. ಆದರೆ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರುಕಟ್ಟೆಯೇ ಇಲ್ಲವಾಗಿದೆ. ಮೇಲಾಗಿ ವರ್ತಕರು ಸಹ ಹಣ್ಣುಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಕೈಗೆ ಬಂದಿರುವ ಫಸಲನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ, ಕೊಡಾಲು ಸೇರಿ ಸಮೀಪದ ಚಿಕ್ಕಂತಾಪುರ, ಸುಲ್ತಾನಪುರ, ತೋರಣಗಲ್ಲು ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಹಣ್ಣುಗಳನ್ನು ದಾನ ಮಾಡಲಾಗಿದೆ ಎಂದು ತಿಮ್ಮೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next