Advertisement

ಕೈ ಅಭ್ಯರ್ಥಿಯಾಗಿ ವೆಂಕಟರಾವ್‌ ಕಣಕ್ಕೆ

05:50 PM Nov 17, 2019 | Naveen |

ಬಳ್ಳಾರಿ: ವಿಜಯನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎಸ್‌.ಆನಂದ್‌ಸಿಂಗ್‌ ವಿರುದ್ಧ ಕಾಂಗ್ರೆಸ್‌ ಪಕ್ಷ ಜಿಲ್ಲೆಯ ಸಂಡೂರು ಮೂಲದ ವೆಂಕಟರಾವ್‌ ಘೋರ್ಪಡೆಯವರನ್ನು ಕಣಕ್ಕಿಳಿಸಲಿದೆ.

Advertisement

ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಸ್ಥಳೀಯ ಪ್ರಭಾವಿ ಮುಖಂಡರಾದ ಎಚ್‌.ಎನ್‌.ಎಫ್‌.ಇಮಾಮ್‌ ನಿಯಾಜಿ, ಮಾಜಿ ಶಾಸಕ ಶಿರಾಜ್‌ಶೇಖ್‌, ಕಲ್ಲುಕಂಬ ಪಂಪಾಪತಿ, ಕೆ.ಎಸ್‌.ಎಲ್‌. ಸ್ವಾಮಿ ಅವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ ಪಕ್ಷದ ವರಿಷ್ಠರು ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಜಿಲ್ಲೆಯ ಸಂಡೂರು ಮೂಲದ ವೆಂಕಟರಾವ್‌ ಘೋರ್ಪಡೆ ಹೆಸರನ್ನು ಅಂತಿಮಗೊಳಿಸಿದ್ದು, ಪಕ್ಷದ ಟಿಕೆಟ್‌ ನೀಡಿ ಬಿಜೆಪಿಯ ಅನರ್ಹ ಶಾಸಕ ಆನಂದ್‌ಸಿಂಗ್‌ ವಿರುದ್ಧ ಕಣಕ್ಕಿಳಿಸಲಿದೆ.

ಯಾರೀ ವೆಂಕಟರಾವ್‌ ಘೋರ್ಪಡೆ: ಮೂಲತಃ ಸಂಡೂರಿನವರಾದ ವೆಂಕಟರಾವ್‌ ಘೋರ್ಪಡೆಯವರು ಮಾಜಿ ಸಚಿವ ಎಂ.ವೈ. ಘೋರ್ಪಡೆ ಯವರ ಸಹೋದರ. ಜಿಲ್ಲೆಯ ಸಂಡೂರು ತಾಲೂಕು ಚೋರನೂರು ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿ ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಗಿದ್ದರು.

ಬಳಿಕ 2004ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರತಿಸ್ಪ ರ್ಧಿ ಅಂದು ಜೆಡಿಎಸ್‌ ಪಕ್ಷದಿಂದ ಕಣಕ್ಕಿಳಿದಿದ್ದ ಮಾಜಿ ಸಚಿವ ಸಂತೋಷ್‌ಲಾಡ್‌ ವಿರುದ್ಧ ಪರಾಭವಗೊಂಡಿದ್ದರು. ಇದಾದ ಬಳಿಕ 2010ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದ ವೆಂಕಟರಾವ್‌ ಘೋರ್ಪಡೆಯವರು ಪ್ರತಿಸ್ಪರ್ಧಿ ಬಿಜೆಪಿಯ ಮೃತ್ಯುಂಜಯ ಜಿನಗಾ ವಿರುದ್ಧ ಸೋಲನುಭವಿಸಿದ್ದರು. ಇದೀಗ ಮತ್ತೂಮ್ಮೆ ಅದೃಷ್ಟ ಪರೀಕ್ಷಿಸಿಕೊಳ್ಳಲು ಮುಂದಾಗಿರುವ ವೆಂಕಟರಾವ್‌ ಘೋರ್ಪಡೆಯವರು ವಿಜಯನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next