Advertisement

Bellary; “ಬ್ರದರ್ಸ್‌’ ವಿಧಾನಸೌಧಕ್ಕೇ ಬಾಂಬ್‌ ಇಡ್ತಾರೆ: ಶ್ರೀರಾಮುಲು

11:37 PM Mar 12, 2024 | Team Udayavani |

ಬಳ್ಳಾರಿ: ಬಾಂಬ್‌ ಹಾಕಿದವರನ್ನೆಲ್ಲ “ಬ್ರದರ್ಸ್‌’ ಎಂದು ಕರೆಯುತ್ತ ಹೋದರೆ ಮುಂದೆ ಅವರು ವಿಧಾನಸೌಧಕ್ಕೆ ಬಾಂಬ್‌ ಇಡ್ತಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಬಿಜೆಪಿ ಎಸ್‌ಟಿ ಮೋರ್ಚಾ ಹಮ್ಮಿಕೊಂಡಿದ್ದ ಪರಿಶಿಷ್ಟ ವರ್ಗಗಳ ಜಿಲ್ಲಾಮಟ್ಟದ ಮುನ್ನಡೆ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದಾಗ ಡಿಸಿಎಂ ಡಿ.ಕೆ.ಶಿವಕುಮಾರ್‌, ಬಾಂಬ್‌ ಸ್ಫೋಟಿಸಿದವರ ಬಗ್ಗೆ ಹಾಗೆ ಮಾತನಾಡಬಾರದು. ಅವರು ನಮ್ಮ ಬ್ರದರ್ಸ್‌, ಅವರು ಅಮಾಯಕರು ಎಂದಿದ್ದರು. ಈಗ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಾದ ಬಾಂಬ್‌ ಸೊ #àಟಕ್ಕೂ ಅವರು ಹೀಗೆ ಎನ್ನುತ್ತಾರೆ. ಹೀಗೆ ಬಾಂಬ್‌ ಇಡುವವರನ್ನೆಲ್ಲ ಬ್ರದರ್ಸ್‌, ಅಮಾಯಕರು ಎಂದು ಅವರ ತುಷ್ಟೀಕರಣ ಮಾಡುತ್ತ ಹೋದರೆ ಮುಂದೊಂದು ದಿನ ವಿಧಾನಸೌಧಕ್ಕೆ ನುಗ್ಗಿ ಬಾಂಬ್‌ ಇಡುತ್ತಾರೆ ಎಂದು ಎಚ್ಚರಿಸಿದರು.

ಒಂದು ಕಾಲದಲ್ಲಿ ಶಾಂತಿಗೆ ಹೆಸರಾಗಿದ್ದ ಬಳ್ಳಾರಿ ಈಗ ಉಗ್ರರ ಅಡಗು ತಾಣವಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ ಉಗ್ರ ನಮ್ಮೂರಿಗೆ ಮೂರು ಬಾರಿ ಬಂದಿದ್ದ ಎಂದು ಎನ್‌ಐಎ ಹೇಳಿದೆ. ಇದನ್ನು ಗಮನಿಸಿದರೆ ನಮ್ಮ ಜಿಲ್ಲೆಯಲ್ಲಿ ಎಲ್ಲಿ ಬೇಕಿದ್ದರೂ ಉಗ್ರರು ವಾಸ ಮಾಡುತ್ತಿರಬಹುದು. ನಮ್ಮ ಜತೆಯೂ ಇರಬಹುದು ಎಂದು ಅವರು ಎಚ್ಚರಿಸಿದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next