Advertisement

ಯೋಗದಿಂದ ಆರೋಗ್ಯ ಸುಧಾರಣೆ

11:21 AM Jun 23, 2019 | Naveen |

ಬಳ್ಳಾರಿ: ನಗರದ ಮದ್ದಿಕೇರಿ ಭೀಮಯ್ಯಶ್ರೇಷ್ಠಿ ಪ್ರೌಢಶಾಲೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

Advertisement

ಜಿಲ್ಲಾ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯನ್ನು ಶಾಲೆಯ ಮಾರ್ಗದರ್ಶಿ ಸೊಂತ ವೆಂಕಟಲಕ್ಷ್ಮಿ ಉದ್ಘಾಟಿಸಿ ಮಾತನಾಡಿದರು.

ಸಮಿತಿಯ ಅಧ್ಯಕ್ಷ ಪಿ.ನಟರಾಜು ಅವರು ಯೋಗಾದಲ್ಲಿನ ವಿವಿಧ ಆಸನಗಳ ಮಹತ್ವ ಕುರಿತು ವಿವರಿಸಿದರು. ಸಮಿತಿಯ ಸಂಯೋಜಕ ಇಸ್ವಿ ಪಂಪಾಪತಿ, ಪ್ರತಿದಿನ ಯೋಗಭ್ಯಾಸದಲ್ಲಿ ತೊಡಗುವ ಮೂಲಕ ಆರೋಗ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದರು. ಸಂಯೋಜಕ ಕೆ.ಚಿದಂಬರ, ಕನ್ನಡ ಚೈತನ್ಯವೇದಿಕೆ ಅಧ್ಯಕ್ಷ ಪಿ.ರಘುರಾಮ್‌, ಕಣೇಕಲ್ಲು ಯರ್ರಿಸ್ವಾಮಿ, ರುದ್ರಪ್ಪ, ರುದ್ರಮುನಿ, ಎಸ್‌.ಮಹೇಶ್‌ಗೌಡ, ಪುರಾಣಿಕ್‌, ಮುಖ್ಯಗುರು ಕೆ.ವಿ. ಶ್ರೀನಿವಾಸ್‌, ಶಿಕ್ಷಕರಾದ ಗಂಗಾಧರ, ಮಧುಶೇಖರ್‌, ಹೇಮಾವತಿ, ಶಶಿಕಲಾ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಿಬ್ಬಂದಿಗಳಾದ ಗೌತಮಿ, ರಫೀಕ್‌, ರಾಧಿಕಾರಾಣಿ, ರಾಮಾಂಜನೇಯ ಇತರರಿದ್ದರು. ಕೊನೆಯಲ್ಲಿ ಮಕ್ಕಳಿಗೆ ಹಾಲು, ಹಣ್ಣು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next