Advertisement

ಬೆಳ್ಳಾರೆ: ವೈಶಾಖ ಪೂರ್ಣಿಮಾ ಮಹೋತ್ಸವ 

04:05 PM May 12, 2018 | |

ಬೆಳ್ಳಾರೆ : ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯದಲ್ಲಿ ವೈಶಾಖ ಪೂರ್ಣಿಮಾ ಮಹೋತ್ಸವ ನಡೆಯಿತು. ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಶ್ಯಾನ್‌ಭಾಗ್‌ ನೇತೃತ್ವದಲ್ಲಿ ಪ್ರಾರ್ಥನೆ ನಡೆದು ಕಲಶಾಭಿಷೇಕ ನೆರವೇರಿತು. ಬಳಿಕ ಶ್ರೀ ದೇವರ ಮಹಾಪೂಜೆ ಜರಗಿತು.

Advertisement

ರಾತ್ರಿ ಲಕ್ಷ್ಮೀ ವೆಂಕಟ್ರಮಣ ದೇವರ ಪೇಟೆ ಸವಾರಿ, ಬೆಳ್ಳಿ ಪಲ್ಲಕಿ ಉತ್ಸವ, ಅಷ್ಟಾವಧಾನ, ವಸಂತ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಶ್ಯಾನ್‌ಭಾಗ್‌, ಮೊಕ್ತೇಸರರಾದ ಎಂ. ಲಕ್ಷ್ಮೀನಾರಾಯಣ ಶ್ಯಾನ್‌ಭಾಗ್‌, ಬಿ. ಸುರೇಶ್‌ ಶೆಣೈ, ಬಿ. ಮಿಥುನ್‌ ಶೆಣೈ, ಬಿ. ಕೃಷ್ಣ ಪೈ, ಗೌಡ ಸಾರಸ್ವತ ಯುವಕ ವೃಂದದ ಅಧ್ಯಕ್ಷ ಎಂ. ರಾಜೇಶ ಶ್ಯಾನ್‌ಭಾಗ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next