Advertisement
ನಗರದ ಪುರಾತನ ಚರ್ಚ್ಗಳಲ್ಲಿ ಒಂದಾಗಿರುವ ವಿವೇಕ ನಗರದ ಇನ್ಫಾಂಟ್ ಜೀಸಸ್ ಚರ್ಚ್ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜ.5ರಿಂದ ಜ.14ರವರೆಗೆ ವಾರ್ಷಿಕೋತ್ಸವ ಸಮಾರಂಭ (ಬಾಲ ಯೇಸುವಿನ ಹಬ್ಬ) ಆಯೋಜಿಸಲಾಗಿತ್ತು. ಕೊನೆ ದಿನವಾದ ಸೋಮವಾರ ಸಂಜೆ 6 ಗಂಟೆಗೆ ಬಾಲ ಯೇಸುವಿನ ತೇರನ್ನು ಏಳೆಯುವ ಮೂಲಕ ಹಬ್ಬಕ್ಕೆ ತೆರೆ ಏಳೆಯಲಾಯಿತು.
Related Articles
Advertisement
ಕ್ರೈಸ್ತರು ಮೃದು ಸ್ವಭಾವ ಸರಳ ವ್ಯಕ್ತಿತ್ವದವರು – ಸಿಎಂ: ನಾನು ಚಿಕ್ಕವಯಸ್ಸಿನಿಂದ ಗಮನಿಸಿದಂತೆ ಕ್ರೈಸ್ತ ಸಮಯದಾಯವು ಅತ್ಯಂತ ಮೃದು ಸ್ವಾಭಾವದ, ಸರಳ ವ್ಯಕ್ತಿತ್ವದವರು. ಅಲ್ಲದೇ ಕ್ರೈಸ್ತರು ತಮ್ಮೊಡನೆ ಇತರೆ ಸಮುದಾಯವನ್ನು ಅತೀ ಹೆಚ್ಚು ಗೌರವಿಸುವ ಗುಣವನ್ನು ಹೊಂದಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ವಾರ್ಷಿಕೋತ್ಸವ ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ಬಾರಿ ಸಿಎಂ ಆಗಿದ್ದಾಗ ಜನತಾದರ್ಶನದಲ್ಲಿ ಸ್ವಾಭಿಮಾನದ ಜೀವನ ನಡೆಸಬೇಕು ಎಂದು ಮಹತ್ವಾಕಾಂಕ್ಷೆಯುಳ್ಳ ವಿದ್ಯಾವಂತ 600 ವಿಕಲಚೇತನರಿಗೆ ಕೆಪಿಟಿಸಿಎಲ್ನಲ್ಲಿ ತಾತ್ಕಾಲಿಕ ಹುದ್ದೆಯನ್ನು ಕೊಡಿಸಿದ್ದೆ. ಆನಂತರ ದಿನಗಳಲ್ಲಿ ಹುದ್ದೆಯ ಖಾಯಂ ಮಾಡಿಕೊಡಲು ಸಾಕಷ್ಟು ಮನವಿ ಬಂದಿದ್ದವು ಎಂದು ಹೇಳಿದರು.
ಕುಮಾರಸ್ವಾಮಿ ಕೇವಲ ರೈತರ ಸಿಎಂ ಎನ್ನುವುದು ಬೇಡ. ಬೆಂಗಳೂರಿನಲ್ಲಿ 42 ಸಾವಿರ ಕೋಟಿ ರೂ ವೆಚ್ಚದಲ್ಲಿ ಫೆರಿಫೆರಲ್ ರಿಂಗ್ ರಸ್ತೆ ಹಾಗೂ ಎಲಿವೇಟೆಡ್ ಕಾರಿಡಾರ್ ರಸ್ತೆ, 36 ಸಾವಿರ ಕೋಟಿ ರೂ. ವೆಚ್ಚದಲ್ಲಿ ಉಪನಗರ ರೈಲು ಯೋಜನೆಗೆ ಚಾಲನೆ ನೀಡಿ ನಗರ ವಾಸಿಗಳ ಸಂಚಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುಲು ಮುಂದಾಗಿದ್ದೇವೆ.
ಇನ್ನು ಕ್ರೈಸ್ತರಿಗೆ ಸ್ಮಶಾನದ ಕೊರತೆ ಇದೆ ಎಂದು ಧರ್ಮಾಧ್ಯಕ್ಷರು ಗಮನಕ್ಕೆ ತಂದಿದ್ದು, ಅದನ್ನು ನಿವಾರಿಸಲು ನಿಟ್ಟಿನಲ್ಲಿ ಈಗಾಗಲೇ ಮೈತ್ರಿ ಸರ್ಕಾರ ಕ್ರಮಕೈಗೊಳ್ಳತ್ತಿದೆ ಎಂದರು. ಮಾಜಿ ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್ ಮೋರಸ್ ಮಾತನಾಡಿದರು.
ಈ ವೇಳೆ ಬೆಂಗಳೂರಿನ ಕ್ಯಾಥೋಲಿಕ್ ಚರ್ಚ್ಗಳಿಗೆ ಸಂಬಂಧಿಸಿದಂತೆ www.bangalorearchdiocese.org ನೂತನ ವೆಬ್ಸೈಟ್ಗೆ ಚಾಲನೆ ನೀಡಲಾಯಿತು. ಶಾಸಕ ಎನ್.ಎ.ಹ್ಯಾರಿಸ್, ಜಯನಗರ ಶಾಸಕಿ ಸೌಮ್ಯರೆಡ್ಡಿ, ಶಾಸಕಿ ವಿನೇಶಾ, ರೆವೆರಂಡ್ ಫಾದರ್ ಜಯನಾಥನ್, ಫಾದರ್ ಅಂಥೋನಿಸ್ವಾಮಿ, ಫಾದರ್ ಜೋಸೆಪ್ ಮಿನಾನ್ಸ್, ಸ್ಥಳೀಯ ಬಿಬಿಎಂಪಿ ಸದಸ್ಯ ಶಿವಕುಮಾರ್ ಉಪಸ್ಥಿತರಿದ್ದರು.