Advertisement

ಬೆಳಗಾವಿ ರಾಜಕಾರಣಕ್ಕೆ ಸರಕಾರ ಬೀಳಿಸೋದು,ಉಳಿಸೋದು ಗೊತ್ತು’

06:55 AM Oct 06, 2018 | Team Udayavani |

ಬಾಗಲಕೋಟೆ: ಬೆಳಗಾವಿ ರಾಜಕಾರಣಕ್ಕೆ ರಾಜ್ಯ ಸರ್ಕಾರ ಬೀಳಿಸೋದು, ಉಳಿಸೋದು ಗೊತ್ತು ಎಂದು ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಿಂದ ಸರ್ಕಾರ ಬೀಳಿಸೋ ಪ್ರಯತ್ನ ನಡೆದಿಲ್ಲ. ಸಮ್ಮಿಶ್ರ ಸರ್ಕಾರ ತನ್ನಿಂದ ತಾನೇ ಬೀಳಲಿದೆ ಎಂದರು.

ಹೆಬ್ಟಾಳಕರ್‌ ಜೋರ್‌ ಅದಾಳ್‌: ಬೆಳಗಾವಿಯ ಶಾಸಕಿ ಲಕ್ಷ್ಮಿ ಹೆಬ್ಟಾಳಕರ್‌ ಬಾಳ್‌ ಜೋರ್‌ ಅದಾಳ. ಜಾರಕಿಹೊಳಿ ಸಹೋದರರೂ ಜೋರ್‌ ಅದಾರ. ಏನಾಗುತ್ತದೆ ಮುಂದೆ ನೋಡೋಣ ಎಂದರು.

ಮುಂಬರುವ ಲೋಕಸಭೆ ಚುನಾವಣೆ ವೇಳೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರಕ್ಕೆ ನಾನು ಮತ್ತು ನನ್ನ ಮಗ ಬಿಜೆಪಿ ಟಿಕೆಟ್‌
ಆಕಾಂಕ್ಷಿಗಳಾಗಿದ್ದೇವೆ. ಮೊದಲು ನನ್ನ ಮಗನಿಗೆ ಆದ್ಯತೆ, ಒಂದು ವೇಳೆ ಮಗನಿಗೆ ಟಿಕೆಟ್‌ ಕೊಡದಿದ್ದರೆ ನಾನು ಪ್ರಯತ್ನಿಸುತ್ತೇನೆ. ನಮ್ಮಿಬ್ಬರಿಗೂ ಟಿಕೆಟ್‌ ನೀಡದೇ ಬೇರೆ ಯಾರಿಗೇ ಟಿಕೆಟ್‌ ಕೊಟ್ಟರೂ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

ಸಚಿವ ಸ್ಥಾನ ಕೊಡಬೇಕಿತ್ತು: ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಸ್ಥಾನಮಾನ ನೀಡದಿರುವ ಕುರಿತು ಪ್ರತಿಕ್ರಿಯಿಸಿದ ಅವರು,ಲಿಂಗಾಯತರಿಗೆ ಆದ್ಯತೆ ನೀಡಿ, ಸಚಿವ ಸ್ಥಾನ ಕೊಡಬೇಕಿತ್ತು. ಆದರೆ ಯಾಕೆ ಸಚಿವ ಸ್ಥಾನ ನೀಡಿಲ್ಲ
ಎಂಬುದು ಇಂದಿಗೂ ಗೊತ್ತಾಗುತ್ತಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next