Advertisement

ಬೆಳಗಾವಿ ಪಾಲಿಕೆಯಲ್ಲಿ ಮೊದಲ ಬಾರಿಗೆ ಮೊಳಗಿದ ನಾಡಗೀತೆ

03:45 AM Jun 25, 2017 | Team Udayavani |

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಶನಿವಾರ ಮೊದಲ ಬಾರಿಗೆ ಕನ್ನಡ ನಾಡಗೀತೆ ಮೊಳಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಕನ್ನಡ-ಮರಾಠಿ ಭಾಷಾ ಜಗಳದಲ್ಲಿಯೇ ಮುಳುಗಿದ್ದ ಪಾಲಿಕೆಯಲ್ಲಿ “ಜಯ ಭಾರತ ಜನನಿಯ ತನುಜಾತೆ…’ನಾಡಗೀತೆ ಮೊಳಗಿತು. 

Advertisement

ಕನ್ನಡ ವಿರೋಧಿ ಚಟುವಟಿಕೆಯಲ್ಲಿ ಹಾಗೂ ರಾಜ್ಯೋತ್ಸವದಂದು ಕರಾಳ ದಿನಾಚರಣೆಯಲ್ಲಿ ಭಾಗಿಯಾಗುವ ಮಾಜಿ ಮೇಯರ್‌ ಸರಿತಾ ಪಾಟೀಲ, ಶಾಸಕ ಸಂಭಾಜಿ ಪಾಟೀಲ ಸೇರಿ ಎಂಇಎಸ್‌ನ ಎಲ್ಲ ಸದಸ್ಯರು ಎದ್ದು ನಿಂತು ಗೌರವ ಸಲ್ಲಿಸಿದರು. ಎಂಇಎಸ್‌ ಸದಸ್ಯರಿಗೆ ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಚಾಟಿ ಬೀಸಿದ್ದರಿಂದ ಈ ಬದಲಾವಣೆ ಕಾಣುವಂತಾಗಿದೆ.

ಬೆಳಗಾವಿ ಪಾಲಿಕೆಯಲ್ಲಿ ಮರಾಠಿ ಭಾಷಿಕರ ಆಡಳಿತವಿದೆ. ಮೊದಲ ಬಾರಿಗೆ ನಾಡಗೀತೆ ಹಾಡುವ ಪ್ರಕ್ರಿಯೆ ನಡೆದಿದ್ದಕ್ಕೆ ಮರಾಠಿ ಭಾಷಿಕ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ನಾಡಗೀತೆ ಬಗ್ಗೆ ಸರ್ಕಾರದಿಂದ ಆದೇಶ ಬಂದಿದೆಯೇ ಎಂದು ಪಾಲಿಕೆ ಅಭಿಯಂತರಾದ ಲಕ್ಷ್ಮೀ ನಿಪ್ಪಾಣಿಕರ ಬಳಿ ಕೇಳಿದ್ದರು. ಸರ್ಕಾರದಿಂದ ಡಿಸಿ ಕಚೇರಿಗೆ ನಾಡಗೀತೆ ಹೇಳುವ ಬಗ್ಗೆ ಆದೇಶ ಬಂದಿದೆ ಎಂದು ಅವರು ಹೇಳಿದಾಗ  ಸದಸ್ಯರು ಮರಳಿದರು.

ಶನಿವಾರ ನಡೆದ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಚುನಾವಣೆ ಪ್ರಕ್ರಿಯೆ ಮುನ್ನ ಕೋರಂ ಭರ್ತಿ ಆಗದ್ದನ್ನು ಗಮನಿಸಿದ ಜಿಲ್ಲಾಧಿಕಾರಿ, ಸದಸ್ಯರಿಗೆ ಸೂಚನೆ ನೀಡಿ, ಐದು ನಿಮಿಷದೊಳಗೆ ಕೋರಂ ಭರ್ತಿ ಆಗದಿದ್ದರೆ ಬಾಗಿಲು ಬಂದ್‌ ಮಾಡುವುದಾಗಿ ಹೇಳಿದರು. ಎಲ್ಲ ಸದಸ್ಯರೂ ಒಳ ಬಂದೊಡನೆ ನಾಡಗೀತೆ ಹಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next