Advertisement

ಬೆಳಗಾವಿ : ಖಂಜರಗಲ್ಲಿ ಯುವಕನಿಗೆ ಚಾಕು ಇರಿತ

09:48 AM Oct 24, 2019 | Team Udayavani |

ಬೆಳಗಾವಿ: ಕಾರು ಚಾಲಕ ಲೈಟ್ ಹಾಕಿದ ನೆಪ ಇಟ್ಟುಕೊಂಡು ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ಯುವಕನೋರ್ವನಿಗೆ ಚಾಕು‌ ಇರಿದ ಘಟನೆ ನಗರದ ಖಂಜರಗಲ್ಲಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

Advertisement

ಖಂಜರ ಗಲ್ಲಿಯ ರಿಜ್ವಾನ್ ಶಫಿ ಮೋಮಿನ ಎಂಬಾತ ಗಾಯಗೊಂಡಿದ್ದು, ಕೂಡಲೇ ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಕು‌ ಇರಿದ ಗೋವಾ ಮೂಲದ ಲಾಯಿಕ್ ಅಹ್ಮದ ಹರೂಣ ಮೋತಿವಾಲೆ ಹಾಗೂ ಸವೇಜ ಶೇರಖಾನ‌ ಪಠಾಣ ಎಂಬವರು ಪರಾರಿಯಾಗಿದ್ದು ಇವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಗೋವಾ ಮೂಲದ ವ್ಯಕ್ತಿ ತನ್ನ ಸ್ಕಾರ್ಪಿಯೋ ವಾಹನ ತೆಗದುಕೊಂಡು ಬರುವಾಗ ಇನ್ನೊಂದು ವಾಹನ ಅಲ್ಲಯೇ ನಿಂತಿದ್ದು. ಆಗ ಫೆಡ್ ಲೈಟ್(ಪ್ರಖರ ಬೆಳಕು) ಹಚ್ಚಿದ ಎಂಬ ಕಾರಣಕ್ಕೆ ಜಗಳ ನಡೆದಿದೆ.‌ ಮಾತಿಗೆ‌ ಮಾತು ಬೆಳೆದು ಇಬ್ಬರ ಮಧ್ಯೆ ಗಲಾಟೆಯಾಗಿದೆ. ಆಗ ರಿಜ್ವಾನ್ ಶಫಿ ಮೇಲೆ ಚಾಕು ಇರಿದು ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.‌ ಗಾಯಗೊಂಡಿರುವ ರಿಜ್ವಾನ ಶಫಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಪ್ರದೇಶದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು ಯಾವುದೇ ಗಲಭೆ ನಡೆಯದಂತೆ ಬಂದೋಬಸ್ತ್ ಹಾಕಿದ್ದಾರೆ. ವೈಯಕ್ತಿಕ ಕಾರಣಕ್ಕೆ ಈ ಜಗಳವಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next