Advertisement

ಶೆಟ್ಟಿಗಲ್ಲಿ ರಸ್ತೆಯಲ್ಲಿ ಮಣ್ಣಿನ ರಾಶಿ-ತೆರವಿಗೆ ನಿವಾಸಿಗಳ ಆಗ್ರಹ

10:10 PM Nov 06, 2020 | sudhir |

ಬೆಳಗಾವಿ: ಕಳೆದ ಮೂರು ತಿಂಗಳಿಂದ ನಗರದ ಶೆಟ್ಟಿಗಲ್ಲಿಯ ಮುಖ್ಯ ಪ್ರವೇಶ ಮಾರ್ಗ ಮುಕ್ತ ಸಂಚಾರಕ್ಕೆ ದಿಗ್ಬಂಧನ ಹಾಕಲಾಗಿದೆ. ಹಳೇ ಪಿಬಿ ರಸ್ತೆಯನ್ನು ಕಾಂಕ್ರೀಟೀಕರಿಸುವ ನೆಪದಲ್ಲಿ ಶೆಟ್ಟಿಗಲ್ಲಿ ಪ್ರವೇಶದ ತಿರುವಿನಲ್ಲಿ ರಸ್ತಗೆ ಅಡ್ಡಲಾಗಿ ಮಣ್ಣು, ಕಲ್ಲಿನ ರಾಶಿಯ ದಿಬ್ಬವನ್ನು ಸೃಷ್ಟಿಸಲಾಗಿದೆ. ಅಟೋಗಳಾಗಲಿ, ಕಾರ್‌, ಟೆಂಪೋಗಳಾಗಲಿ ಈ ಮಾರ್ಗವಾಗಿ
ಸಂಚರಿಸಲಾಗದೆ ಪಕ್ಕದ ಚವಾಟಗಲ್ಲಿ ರಸ್ತೆಯಿಂದ ಸುತ್ತು ಹಾಕಿ ಶೆಟ್ಟಿಗಲ್ಲಿಯ ಇನ್ನೊಂದು ಬದಿಯಿಂದ ಬೀದಿ ಪ್ರವೇಶಿಸುವ
ಅನಿವಾರ್ಯತೆ ಇಲ್ಲಿನ ರಹವಾಸಿಗಳಿಗೆ ಕಳೆದ ಮೂರು ತಿಂಗಳಿನಿಂದ ಉಂಟಾಗಿದೆ.

Advertisement

ಮಣ್ಣಿನ ದಿನ್ನೆಯಲ್ಲೇ ದ್ವಿಚಕ್ರ ವಾಹನಗಳ ಸವಾರರು ಎದ್ದು-ಬಿದ್ದು ಹಾಯ್ದು ಹೋಗುತ್ತ ಹೇಗೋ ಹೊಂದಿಕೊಂಡಿದ್ದಾರೆ.
ಆದರೆ ಉಳಿದ ವಾಹನ ಸವಾರರು ಸುತ್ತು ಹೊಡೆಯಲೇ ಬೇಕಾಗಿದೆ. ಅಕ್ಕಪಕ್ಕದ ಬೇರೆ ಗಲ್ಲಿಗಳ ರಸ್ತೆಗಳು ಮುಕ್ತವಾಗಿದ್ದರೂ ಶೆಟ್ಟಿಗಲ್ಲಿಯ ಈ ರಸ್ತೆ ದಿಗ್ಬಂಧನ ಇಲ್ಲಿನ ರಹವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ನಿತ್ಯ ಕಚೇರಿ, ಶಾಲಾ
ಕಾಲೇಜುಗಳಿಗೆ ಹೋಗಿಬರುವ ಮಾರ್ಗವೂ ಇದಾಗಿದೆ. ಬೀದಿಯಲ್ಲಿನ ಕೆಲ ವಹಿವಾಟಿಗೂ ರಸ್ತೆ ದಿಗ್ಬಂಧನದಿಂದ ಸಮಸ್ಯೆಯಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಎಚ್ಚರಿಸಲಾಗಿದೆ. ಇದು ಪಾಲಿಕೆ ವ್ಯಾಪ್ತಿಗೆ ಬರುತ್ತದೋ,
ಇಲ್ಲವೇ ಲೋಕೋಪಯೋಗಿ ವ್ಯಾಪ್ತಿಗೋ ಎನ್ನುವ ಗೊಂದಲದಲ್ಲಿ ರಹವಾಸಿಗಳಿದ್ದಾರೆ. ತಕ್ಷಣ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಕಲ್ಲು ಮಣ್ಣಿನ ರಾಶಿಯನ್ನು ಸಂಬಂಧಪಟ್ಟ ಆಡಳಿತ ತೆರವುಗೊಳಿಸದಿದ್ದಲ್ಲಿ ಬೀದಿಯ ರಹವಾಸಿಗಳು ಹಳೇ ಪಿಬಿ ರಸ್ತೆಗಿಳಿದು ರಸ್ತೆತಡೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next