Advertisement

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

10:10 AM Apr 28, 2024 | Team Udayavani |

ಬೆಳಗಾವಿ: ಕುಂದಾನಗರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾವೇಶಕ್ಕೆ ಜನಸಾಗರ ಹರಿದು ಬರುತ್ತಿದ್ದು, ನಗರದ ಮಾಲಿನಿ‌‌ ಸಿಟಿ ಮೈದಾನಕ್ಕೆ ‌ಬೆಳಗ್ಗೆ‌ 7 ಗಂಟೆಯಿಂದಲೇ ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿಗಳ‌ ಪರ‌ ಮತಯಾಚಿಸಲು ಪ್ರಧಾನಿ ಮೋದಿ ಬೆಳಗಾವಿಗೆ ಶನಿವಾರ ರಾತ್ತಿಯೇ ಆಗಮಿಸಿದ್ದು, ಕಾಕತಿಯ ಐಟಿಸಿ ವೆಲ್ ಕಮ್‌ ಹೊಟೇಲ್ ಬಂದು ವಾಸ್ತವ್ಯ ಮಾಡಿದ್ದರು. ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಬೆಳಗಾವಿ ಹಾಗೂ ಚಿಕ್ಕೋಡಿ‌ ಲೋಕಸಭಾ ಕ್ಷೇತ್ರದಿಂದ ಆಗಮಿಸಿರುವ ಬಿಜೆಪಿ ಕಾರ್ಯಕರ್ತರು, ಮೋದಿ‌ ಮೋದಿ ಎಂದು ಘೋಷಣೆ ಮೊಳಗಿಸುತ್ತಿದ್ದಾರೆ. ಮೋದಿ ನಿಂತ ಭಂಗಿಯ ಚಿತ್ರಗಳನ್ನು ಹಿಡಿದು ಕಾರ್ಯಕರ್ತರು ಕುಣಿದು‌ ಕುಪ್ಪಳಿಸಿದರು.

ಮೈದಾನದ ಸುತ್ತಲೂ ಹಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next