Advertisement

ಸಿಮೆಂಟ್ ರಸ್ತೆ ಕಾಮಗಾರಿ ಶೀಘ್ರ ಆರಂಭಕ್ಕೆ ಒತ್ತಾಯ

05:35 PM Sep 14, 2019 | Team Udayavani |

ಬಳಗಾನೂರು: ಪಟ್ಟದಲ್ಲಿ ಲೋಕೋಪಯೋಗಿ ಇಲಾಖೆ ಯೋಜನೆಯಡಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ರಥದ ಬೀದಿ ಮುಖ್ಯ ರಸ್ತೆಗೆ ಸಿಸಿ ಹಾಕುವ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸುವಂತೆ ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.

Advertisement

ಪಟ್ಟಣದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಚರಂಡಿ, ಮುಖ್ಯರಸ್ತೆ ಡಾಂಬರೀಕರಣ ಸೇರಿ ಸಿಸಿ ರಸ್ತೆ ನಿರ್ಮಾಣವಾಗಬೇಕಿತ್ತು. ಆದರೆ ಗುತ್ತಿಗೆದಾರರು ಡಾಂಬರ ರಸ್ತೆ ಮಾಡಿದ್ದು, ಕಳಪೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕಿತ್ತು ಹೋಗಿದೆ. ಅದಲ್ಲದೆ ಮಾರ್ಗದಲ್ಲಿ ಬರುವ ಕಾಲುವೆಗಳಿಗೆ ಸೇತುವೆ ಮಾಡುವುದನ್ನು ನಿರ್ಲಕ್ಷಿಸಿದ್ದಾರೆ. ಕಳಪೆ ಮರಳು ಬಳಸಿ ಚರಂಡಿ ನಿರ್ಮಿಸಿದ್ದಾರೆ. ಸಿಸಿ ರಸ್ತೆಗೆ ಅದೇ ಕಳಪೆ ಮರಳು ಬಳಸಿ ಮಾಡುತ್ತಿರುವ ಕಾಮಗಾರಿಯನ್ನು ನಾಗರಿಕರು ತಡೆಗಟ್ಟಿದ್ದಾರೆ.

ಸರಕಾರಕ್ಕೆ ರಾಜಧನ ಪಾವತಿಸಿ ಗುಣಮಟ್ಟದ ಮರಳು ಬಳಸುವಂತೆ ನಾಗರಿಕರು ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಒತ್ತಡ ತಂದಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಮಗರಿಯಲ್ಲಿ ತಾಲೂಕಿನ ಪ್ರಭಾವಿ ಮುಖಂಡರ ಪಾಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿಗೆ ನನೆಗುದಿಗೆ ಬೀಳಲು ಕಾರಣವಾಗಿದೆ ಎನ್ನಲಾಗಿದೆ. ಈ ಕುರಿತು ಈಗಾಗಲೇ ಕಾಮಗಾರಿ ಸ್ಥಿತಿಗತಿ ಕುರಿತು ಮುಖಂಡರೊಬ್ಬರು ಅನರ್ಹ ಶಾಸಕ ಪ್ರತಾಪಗೌಡರ ಪಾಟೀಲ ಅವರ ಗಮನಕ್ಕೆ ತರಲಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ನಾಗರಿಕರು ಒತ್ತಾಯಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next