Advertisement

ನೀರು ಸರಬರಾಜು ಕಾರ್ಯ ಆರಂಭ

06:59 PM Apr 28, 2020 | Suhan S |

ಚಿಕ್ಕಮಗಳೂರು: ಬೇಲೂರಿನ ಯಗಚಿ ಜಲಾಶಯದಲ್ಲಿ ನೀರೆತ್ತುವ ಯಂತ್ರದಲ್ಲಿ ಹಾನಿಗೊಂಡಿದ್ದರಿಂದ ನಗರಕ್ಕೆ ನೀರು ಸರಬರಾಜುನಲ್ಲಿ ತೊಂದರೆಯಾಗಿದ್ದು, ಈಗ ದುರಸ್ತಿ ಕಾರ್ಯ ಪೂರ್ಣಗೊಂಡು ನೀರು ಸರಬರಾಜು ಕಾರ್ಯ ನಡೆಯುತ್ತಿದೆ ಎಂದು ನಗರಸಭೆ ಆಯುಕ್ತ ಚಂದ್ರಶೇಖರ್‌ ತಿಳಿಸಿದರು.

Advertisement

ಸೋಮವಾರ ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮತ್ತು ಸ್ವಯಂಸೇವಾ ಸಂಸ್ಥೆಯ ಮುಖಂಡರು ಬೇಲೂರಿನ ನೀರು ಸರಬರಾಜು ಮಾಡುವ ಸ್ಥಳಕ್ಕೆ ಭೇಟಿ ನೀಡಿದ್ದ ಪರಿಶೀಲನೆ ವೇಳೆ ಅವರು ಮಾತನಾಡಿದರು. ಮೊದಲಿದ್ದ ಯಂತ್ರದ ಶಾಫ್ಟ್‌ ಹಾಳಾಗಿದ್ದು, ಅದನ್ನು ತರಿಸಲು ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಯತ್ನಿಸಿದ್ದು, ಕೋವಿಡ್‌ ಕಾರಣದಿಂದ ಕಷ್ಟವಾಗಿತ್ತು. ಈಗ ಹಳೆ ಯಂತ್ರ ದುರಸ್ತಿಯಾಗಿದೆ. ಸೋಮವಾರ ಸಂಜೆಯಿಂದ ನೀರೆತ್ತುವ ಕಾರ್ಯ ಆರಂಭವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next