Advertisement

ಸಿದ್ದು ನಾಯಕತ್ವದ ಅಂತ್ಯ ಆರಂಭ: ಸಚಿವ ಶೆಟ್ಟರ್‌

11:32 PM Dec 08, 2019 | Team Udayavani |

ಹುಬ್ಬಳ್ಳಿ: ಜನರ ನಾಡಿಮಿಡಿತ ಅರಿಯದ ಸಿದ್ದರಾಮಯ್ಯ ಅವರು ಅಹಂ ಹಾಗೂ ಸೊಕ್ಕಿನಿಂದ ಆಡಿದ ಮಾತುಗಳಿಗೆ ಜನರು ಹಾಕುವ ಕೇಕೆಯೇ ಮತ ಎಂದು ಭಾವಿಸಿದ್ದು, ಉಪ ಚುನಾವಣೆ ಫ‌ಲಿತಾಂಶ ನಂತರ ಅವರ ನಾಯಕತ್ವದ ಅಂತ್ಯ ಆರಂಭವಾಗಲಿದೆ ಎಂದು ಸಚಿವ ಜಗದೀಶ ಶೆಟ್ಟರ್‌ ಭವಿಷ್ಯ ನುಡಿದರು.

Advertisement

ನಗರದಲ್ಲಿ ಭಾನುವಾರ ಬಿಜೆಪಿ ಸಾಂಸ್ಥಿಕ ಚುನಾವಣೆ ವೀಕ್ಷಕರ ಸಭೆಯಲ್ಲಿ ಮಾತನಾಡಿ, “ಕೂಸು ಹುಟ್ಟುವ ಮುನ್ನವೇ ಕುಲಾವಿ’ ಎಂಬಂತೆ ಕಾಂಗ್ರೆಸ್‌ನವರು ವರ್ತಿಸತೊಡಗಿದ್ದಾರೆ. ಅಧಿಕಾರದ ವಿಚಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಹಗಲುಗನಸು ಕಾಣುತ್ತಿದ್ದಾರೆ ಎಂದರು.

ಉಪ ಚುನಾವಣೆಯ ಮತದಾನದ ನಂತರದ ಸಮೀಕ್ಷೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬುದನ್ನು ತಿಳಿದು ಸಿದ್ದರಾಮಯ್ಯ ತಮ್ಮ ರಾಗ ಬದಲಿಸಿದ್ದಾರೆ. ಉಪ ಚುನಾವಣೆ ನಂತರ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ, ಬಳಿಕ, ಈ ತರಹದ ಹೇಳಿಕೆ ನೀಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ ಎಂದರು.

ಉಪ ಚುನಾವಣೆ ನಂತರ ಕಾಂಗ್ರೆಸ್‌ ಸೋಲಿನಿಂದ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಂಚಕಾರ ಬರುವ ಎಲ್ಲ ಸಾಧ್ಯತೆಗಳಿದ್ದು, ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಬಿಟ್ಟು ಸಿದ್ದರಾಮಯ್ಯ ವಿನಾಕಾರಣ ಬಿಜೆಪಿ ವಿರುದ್ಧ ಟೀಕಿಸುತ್ತಿದ್ದಾರೆಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next