Advertisement
ನಗರದ ವೆನಾÉಕ್ ಆಸ್ಪತ್ರೆಯಲ್ಲಿ ಈಗಾಗಲೇ ಒಂದು ಕೇಂದ್ರ ಕಾರ್ಯಾಚರಿಸುತ್ತಿದೆ. ಕೆಎಂಸಿ ಆಸ್ಪತ್ರೆಯಲ್ಲಿ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ (ಕೆಎಸ್ಎಪಿಎಸ್) ವತಿಯಿಂದ ಕಾರ್ಯಾಚರಿಸುತ್ತಿರುವ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ)ದ ಏಕೈಕ ಎಆರ್ಟಿ ಕೇಂದ್ರದಲ್ಲಿ ಸುಮಾರು ಒಂದು ಸಾವಿರ ರೋಗಿಗಳು ಔಷಧೋಪಚಾರ ಪಡೆಯುತ್ತಿದ್ದಾರೆ. ಆದರೆ ಇಲ್ಲಿ ಕಾನೂನು ಸಲಹೆ ಲಭ್ಯವಿರಲಿಲ್ಲ. ಈ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆಯು ಕಾನೂನು ಸೇವಾ ಕೇಂದ್ರಕ್ಕಾಗಿ ಬೇಡಿಕೆ ಇಟ್ಟಿತ್ತು.
Related Articles
Advertisement
ಕಾನೂನಿನ ರಕ್ಷಣೆಎಚ್ಐವಿ ರೋಗಿಗಳೆಂದರೆ ಅವರಿಗೆ ಹೆಚ್ಚಿನ ಸಂದರ್ಭಗಳಲ್ಲಿ ಮಾನಸಿಕ, ದೈಹಿಕ ಕಿರುಕುಳ ಸಿಗುವ ಸಾಧ್ಯತೆ ಇರುತ್ತದೆ. ತಾವು ಕೆಲಸ ಮಾಡುವ ಸ್ಥಳ, ಸಾಮಾಜಿಕ ಬದುಕು ಸೇರಿದಂತೆ ತಮ್ಮ ಕುಟುಂಬದಿಂದಲೂ ತಾತ್ಸಾರಕ್ಕೆ ಗುರಿಯಾಗಿರಬಹುದು. ಎಷ್ಟೋ ಸಂದರ್ಭಗಳಲ್ಲಿ ಮನೆಯಿಂದ ಹೊರ ಹಾಕುವ ಘಟನೆಗಳೂ ನಡೆಯುತ್ತವೆ. ಈ ಸಂದರ್ಭದಲ್ಲಿ ರೋಗಿಗಳು ತಮಗೆ ಯಾರೂ ಇಲ್ಲ ಎಂದು ಖನ್ನತೆಗೆ ಒಳಗಾಗುತ್ತಾರೆ. ಜತೆಗೆ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಅಂಥವರಿಗೆ ಕಾನೂನಿನ ರಕ್ಷಣೆ ನೀಡಿ ಅವರ ಹಕ್ಕನ್ನು ಪಡೆದುಕೊಳ್ಳುವಲ್ಲಿ ಈ ಕೇಂದ್ರ ನೆರವಾಗಲಿದೆ. ಜತೆಗೆ ಎಚ್ಐವಿ ತಪಾಸಣೆ, ಆಪ್ತ ಸಮಾಲೋಚನೆ, ಔಷಧ ಮೊದಲಾದ ಸೌಲಭ್ಯಗಳನ್ನು ಕೆಎಸ್ಎಪಿಎಸ್ ಉಚಿತವಾಗಿ ಒದಗಿಸಲಿದೆ. ಆಸ್ಪತ್ರೆಯ ಎಆರ್ಟಿ ಕೇಂದ್ರದ ನೋಡೆಲ್ ಅಧಿಕಾರಿ ಡಾ| ಜಾನ್ ರಾಂಪುರಂ ಅವರ ವಿಶೇಷ ಮುತುವರ್ಜಿಯಿಂದ ಈ ಕೇಂದ್ರ ಆಸ್ಪತ್ರೆಗೆ ಲಭಿಸಿದೆ. ಸಂಬಂಧಪಟ್ಟವರ ಇದರ ಪ್ರಯೋಜನ ಪಡೆಯಬಹುದು ಎನ್ನುತ್ತವೆ ಆಸ್ಪತ್ರೆಯ ಮೂಲಗಳು. ಉಚಿತ ಕಾನೂನು ಸಲಹೆ
ಆಸ್ಪತ್ರೆಯಲ್ಲಿ ಎಆರ್ಟಿ-ಐಸಿಟಿಸಿ ಕೇಂದ್ರಗಳು ಕಾರ್ಯಾಚರಿಸುತ್ತಿದ್ದರೂ, ರೋಗಿಗಳಿಗೆ ಕಾನೂನು ರಕ್ಷಣೆ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕಾನೂನು ಸಲಹಾ ಕೇಂದ್ರವನ್ನು ಒದಗಿಸುವಂತೆ ನಾವು ಸಂಬಂಧಪಟ್ಟರಿಗೆ ಮನವಿ ಮಾಡಿದ್ದೆವು. ಇದೀಗ ಕೇಂದ್ರ ಉದ್ಘಾಟನೆಗೊಂಡಿದ್ದು, ಆಸಕ್ತರು ಉಚಿತ ಕಾನೂನು ಸಲಹೆ ಪಡೆಯಬಹುದು.
– ಡಾ| ರಾಜಾರಾಮ್ ರೈ, ಸೀನಿಯರ್ ಮೆಡಿಕಲ್ ಆಫೀಸರ್ ಎಆರ್ಟಿ ಸೆಂಟರ್, ಕೆಎಂಸಿ ಅತ್ತಾವರ