Advertisement

ಬೀಡಿನಮನೆ ಕಂಬಳ ಸಂಪನ್ನ

02:00 AM Dec 04, 2018 | Karthik A |

ಕೊಲ್ಲೂರು: ಕೆರಾಡಿ ಬೀಡಿನಮನೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಬೀಡಿನಮನೆ ಕಂಬಳವು ಇಲ್ಲಿನ ಕಂಬಳಗದ್ದೆಯಲ್ಲಿ ಡಿ. 2ರಂದು ನಡೆಯಿತು. ಕಂಬಳಕ್ಕೆ ಆಗಮಿಸಿದ ಕೋಣಗಳು ಹಾಗೂ ಯಜಮಾನರನ್ನು ಸಂಘಟಕರು ವಾದ್ಯ ಹಾಗೂ ಸಾಂಪ್ರದಾಯಿಕವಾಗಿ ವೀಳ್ಯ ನೀಡುವುದರ ಮೂಲಕ ಸ್ವಾಗತಿಸಿದರು. ಕಂಬಳವು ಹಲಗೆ, ಹಗ್ಗ ವಿಭಾಗಗಳಲ್ಲಿ ನಡೆದರೆ, ಸ್ಥಳೀಯ ಯುವಕರಿಗೆ ಕೆಸರುಗದ್ದೆ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.

Advertisement

ಖ್ಯಾತ ಚಿತ್ರ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ರಿಷಬ್‌ ಶೆಟ್ಟಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಬೀಡಿನಮನೆ ಕುಟುಂಬದ ಅಶ್ವತ್ಥ್ ಮಾತನಾಡಿದರು. ಈ ಸಂದರ್ಭ ನ್ಯಾಯವಾದಿ ಪ್ರಸನ್ನ ಕುಮಾರ ಶೆಟ್ಟಿ ಕೆರಾಡಿ, ಬೀಡಿನಮನೆ ನರಸಿಂಹ ಶೆಟ್ಟಿ, ಭುಜಂಗ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.

30 ಕ್ಕೂ ಹೆಚ್ಚು ಕೋಣಗಳನ್ನು ಕಂಬಳದ ಸ್ಪರ್ಧೆಯಲ್ಲಿ ಆಯ್ಕೆಗೊಳಿಸಲಾಗಿದ್ದು ಸ್ಪರ್ಧೆಯಲ್ಲಿ ಗೆದ್ದ ಕೋಣಗಳಿಗೆ ನಗದು ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು. ಸ್ಥಳೀಯ ಯುವಕರಿಗೆ ನಡೆದ ಕೆಸರುಗದ್ದೆ ಕ್ರೀಡಾಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು. ಶಿಕ್ಷಕರಾದ ಭಾಸ್ಕರ ಶೆಟ್ಟಿ ಹಾಗೂ ವಿಜಯ ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next