Advertisement

ತೊಗರಿ ಕಡ್ಡಿಯಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ

01:26 PM Feb 17, 2020 | Naveen |

ಬೀದರ: ತೊಗರಿ ಕಡ್ಡಿಯನ್ನು ಸಮಗ್ರವಾಗಿ ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಕಾಂಪೋಸ್ಟ್‌ ರೀತಿಯಲ್ಲಿ ಮಾರ್ಪಾಡು ಮಾಡಬಹುದೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.

Advertisement

ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾದ ತೊಗರಿಯನ್ನು ಹೆಚ್ಚಾಗಿ ಒಣ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಕೆಲ ರೈತರು ನೀರಿನ ಲಭ್ಯತೆ ಇದ್ದಲ್ಲಿ ನೀರಾವರಿ ತೊಗರಿ ಹಾಗೂ ಕೆಲವು ಪ್ರಗತಿಪರ ರೈತರು ನಾಟಿ ತೊಗರಿ ಕೂಡ ಬೆಳೆಯುವುದುಂಟು. ಒಣ ಪ್ರದೇಶದಲ್ಲಿ ಬೆಳೆದ ತೊಗರಿ ಹೆಚ್ಚಾಗಿ ಕಡ್ಡಿಯಿಂದ ಕೂಡಿರುತ್ತದೆ. ನೀರಾವರಿ ತೊಗರಿ ಹೆಚ್ಚಾಗಿ ಕೆಳಭಾಗದಿಂದ ದಪ್ಪವಾಗಿರುವುದರಿಂದ ಇಂತಹ ತೊಗರಿ ಕಟ್ಟಿಗೆಯನ್ನು ಹೆಚ್ಚಾಗಿ ಉರುವಲಿಗೆ ಉಪಯೋಗಿಸುತ್ತಾರೆ.

ತೊಗರಿ ಗಿಡದ ಮೇಲ್ಭಾಗ ಹೆಚ್ಚಾಗಿ ಸಣ್ಣದಾದ ಕಡ್ಡಿ ಇರುವುದರಿಂದ ಭಾಗಶಃ ರೈತರು ಜಮೀನಿನಲ್ಲಿಯೇ ಬಿಟ್ಟು ಹೋಗುತ್ತಾರೆ. ಇದಕ್ಕೆ ಗೊಳ್ಳಿ (ಗೊನ್ನೆ ಹುಳು) ಮಣ್ಣೇರಿಸಿ ಬಿಡುತ್ತದೆ. ಹೀಗೆ ಅದು ಮಣ್ಣಾಗಿ ಬಿಡುತ್ತದೆ. ಇದನ್ನು ಈ ಕೆಳಕಂಡಂತೆ ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಒಳ್ಳೆಯ ಕಾಂಪೋಸ್ಟ್‌ ರೀತಿಯಲ್ಲಿ ಮಾರ್ಪಾಡು ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಜಿಲ್ಲೆಯ ಎಲ್ಲ ರೈತರು ಈ ವೈಜ್ಞಾನಿಕ ಮಾಹಿತಿ ಅಳವಡಿಸಿಕೊಂಡು ಫೆಬ್ರವರಿಯಲ್ಲಿ ಅಳವಡಿಸಿಕೊಂಡಲ್ಲಿ ಜೂನ್‌ (ಬಿತ್ತುವ ಸಮಯಕ್ಕೆ ಸರಿಯಾಗಿ) ತಿಂಗಳಿಗೆ ಒಳ್ಳೆಯ ಕಾಂಪೋಸ್ಟ್‌ ಗೊಬ್ಬರ ಜಮೀನಿಗೆ ಉಪಯೋಗಿಸಲು ಉಪಕಾರಿಯಾಗುವುದೆಂದು ತಿಳಿಸಿದ್ದಾರೆ.

ಗೊಬ್ಬರ ತಯಾರಿಸುವ ವಿಧಾನ ಹೇಗೆ?
10 ಅಡಿ ಉದ್ದ, 6 ಅಡಿ ಅಗಲ, 4 ಅಡಿ ಅಳತೆಯ ಆಳದ ಕಾಂಪೋಸ್ಟ್‌ ಗುಂಡಿ ತಯಾರಿಸಬೇಕು. ಗುಂಡಿಯಲ್ಲಿ ಮೊದಲ 1 ಅಡಿ ಎತ್ತರದವರೆಗೆ ತೊಗರಿ ಕಟ್ಟಿಗೆ ಹಾಕಬೇಕು. ಸಗಣಿ ರಾಡಿ ತಯಾರಿಸಿ ಕಾಂಪೋಸ್ಟ್‌ ಕಲ್ಚರನ್ನು (1 ಟನ್‌ ತೊಗರಿ ಕಟ್ಟಿಗೆಗೆ 1 ಕಿ.ಗ್ರಾಂ. ಕಾಂಪೋಸ್ಟ್‌ ಕಲ್ಚರ್‌ ಬೇಕಾಗುತ್ತದೆ) ಬೆರೆಸಿ ಕಟ್ಟಿಗೆ ಮೇಲೆ ಸಿಂಪರಣೆ ಮಾಡಬೇಕು. ಹೀಗೆ 2-3 ಸ್ಥಿರದಲ್ಲಿ ಲೇಯರ್‌ ತುಂಬಿರಿ. ಗುಂಡಿ ತುಂಬಿದ ನಂತರ ಕಟ್ಟಿಗೆಯು 1 ಅಡಿ ಮೇಲೆ ಬರುವವರೆಗೂ ತುಂಬಿಸಬೇಕು.

Advertisement

ನಂತರ 4-5 ಕೊಡ ನೀರು ಸುರಿಯಬೇಕು. ತೊಗರಿ ಕಟ್ಟಿಗೆ ಮೇಲೆ 2-3 ಇಂಚು ಮಣ್ಣನ್ನು ಕಟ್ಟಿಗೆ ಮುಚ್ಚುವಂತೆ ಮಾಡಿ ಅಥವಾ ಕೆಸರಿನಿಂದ ಸವರಬೇಕು. (ಅವಶ್ಯವೆನಿಸಿದಲ್ಲಿ 15 ದಿನಕ್ಕೆ ನೀರಿನಿಂದ ಸಿಂಪಡಿಸುವುದು) 4 ತಿಂಗಳಲ್ಲಿ ಸಂಪದ್ಭರಿತ ಕಾಂಪೋಸ್ಟ್‌ ಗೊಬ್ಬರ ತಯಾರಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next