Advertisement

ಚೀನ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಯೋಧರಾಗಿ: ವಿಖ್ಯಾತ್‌ ಶೆಟ್ಟಿ

10:33 PM Jun 29, 2020 | Sriram |

ಕಾರ್ಕಳ: ಭಾರತ-ಚೀನ ಗಡಿ ಸಂಘರ್ಷದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ವತಿಯಿಂದ ಕಾರ್ಕಳ ಆನೆಕೆರೆ ಪಾರ್ಕ್‌ನ ವೀರ ಯೋಧರ ಸ್ಮಾರಕದಲ್ಲಿ ಗೌರವ ಅರ್ಪಣೆ ಹಾಗೂ ಪುಷ್ಪ ನಮನ ಸಲ್ಲಿಸಲಾಯಿತು.

Advertisement

ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ ಅವರು ಮಾತನಾಡಿ, ಇಡೀ ವಿಶ್ವವೇ ಚೀನ ವಿರುದ್ಧ ಆಕ್ರೋಶದಲ್ಲಿದ್ದು, ಭಾರತೀಯರು ಒಗ್ಗಟ್ಟಿನ ಮಂತ್ರದೊಂದಿಗೆ ಚೀನ ಷಡ್ಯಂತ್ರವನ್ನು ಮೆಟ್ಟಿ ನಿಲ್ಲಬೇಕು. ಹಾಗೂ 130 ಕೋಟಿ ಭಾರತೀಯರು ಚೀನ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಯೂ ಯೋಧರಾಗುವ ಸಮಯ ಬಂದಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿರಾಜ್‌ ಶೆಟ್ಟಿ, ತಾಲೂಕು ಯುವಮೋರ್ಚಾ ಪ್ರ. ಕಾರ್ಯದರ್ಶಿ ಭರತ್‌ ಜೈನ್‌, ಯೋಗಿಶ್‌ ಸಾಲ್ಯಾನ್‌ ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸುಹಾಸ್‌ ಶೆಟ್ಟಿ ಮುಟ್ಲುಪಾಡಿ ಪ್ರಸ್ತಾವನೆಗೈದು, ಶ್ರೀಕಾಂತ್‌ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next