Advertisement

ಮೊಳಕಾಲ್ಮೂರು: ತಂತಿಬೇಲಿಗೆ ಸಿಲುಕಿ ಕರಡಿ ಪರದಾಟ

09:51 AM Oct 15, 2019 | keerthan |

ಚಿತ್ರದುರ್ಗ: ಮೊಳಕಾಲ್ಮೂರು ಬಳಿ ಜಮೀನೊಂದರಲ್ಲಿ ತಂತಿ ಬೇಲಿಗೆ ಸಿಲುಕಿ ಕರಡಿಯೊಂದು ಪರದಾಡುತ್ತಿದೆ.

Advertisement

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪಟ್ಟಣ ಹೊರವಲಯದ ರಾಯದುರ್ಗ ರಸ್ತೆಯ ಜಮೀನಿನಲ್ಲಿ ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ತಂತಿ ಬೇಲಿ ದಾಟಲು ಹೋಗಿದ್ದ ವೇಳೆ ಜಮೀನಿನ ರಕ್ಷಣೆಗೆ ಹಾಕಿದ್ದ ತಂತಿಬೇಲಿಯಲ್ಲಿ ಸಿಲುಕಿ ಕರಡಿ ಸಂಕಟ ಪಡುತ್ತಿದ್ದು, ಕರಡಿ ಬಿಡಿಸಲು ಜನರೂ ಪರದಾಡುತ್ತಿದ್ದಾರೆ. ಜನರ‌ ಕೂಗಾಟ ಕೇಳಿ ಕರಡಿ ಮತ್ತಷ್ಟು ಕಂಗಾಲಾಗಿದೆ.

ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದು, ಕರಡಿ ಗಾಬರಿಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಒಂದು ಗಂಟೆಯಾದರೂ ಸ್ಥಳಕ್ಕೆ ಸಿಬ್ಬಂದಿ ಬಂದಿಲ್ಲ ಎಂದು ಸ್ಥಳೀತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next