Advertisement

ತಿಪಟೂರಿನಲ್ಲಿ ಕರಡಿ ಪ್ರತ್ಯಕ್ಷ

05:42 PM Feb 05, 2021 | Team Udayavani |

ತಿಪಟೂರು: ನಗರದ ಗೊರಗೊಂಡನಹಳ್ಳಿ ಪೆಟ್ರೋಲ್‌ ಬಂಕ್‌ ಪಕ್ಕದ ವೈ.ಟಿ.ರಸ್ತೆಯಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಜನರಲ್ಲಿ  ತೀವ್ರ ಆತಂಕ ಮೂಡಿಸಿತ್ತು.

Advertisement

ನಗರದ ವೈ.ಟಿ.ರಸ್ತೆಯ ಸರ್ವೋದಯ ಶಾಲೆಯ ಹಿಂಭಾಗದ ತೋಟದಲ್ಲಿ 8 ವರ್ಷದ ಕರಡಿ ಜೋಳದ ಬೆಳೆಯೊಳಗೆ ಅವಿತು ಕುಳಿತಿತ್ತು. ತೋಟದವರು ನೋಡಿದ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬಂದು  ಕರಡಿಯನ್ನು ಹಿಮ್ಮೆಟ್ಟಿಸಿದರು.

ಇದನ್ನೂ ಓದಿ : ಗಲ್ಲು ಆಗುವ ವರೆಗೆ ವಿರಮಿಸುವುದಿಲ್ಲ: ಬೊಮ್ಮಾಯಿ

ತಾಲೂಕಿನ ಕೆರೆಗೋಡಿ, ರಂಗಾಪುರ, ಅನಗೊಂಡನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಎಚ್ಚರಿಕೆಯಿಂದ ಓಡಾಡಬೇಕೆಂದು ಅರಣ್ಯ ಇಲಾಖೆಯ ಆರ್‌ಎಫ್ಒ ರಾಕೇಶ್‌ ಮನವಿ ಮಾಡಿದ್ದಾರೆ. ಡಿವೈಎಸ್‌ಪಿ ಚಂದನ್‌ ಕುಮಾರ್‌, ಎಸಿಎಫ್ ರವಿ, ಮುರಳಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next