Advertisement

ಮತಗಟ್ಟೆಯಲ್ಲಿ ಮೊಬೈಲ್‌ ಬಳಸದಂತೆ ಎಚ್ಚರಿಕೆ

03:37 PM May 12, 2018 | Team Udayavani |

ಪಿರಿಯಾಪಟ್ಟಣ: ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆಸಲು ಸಕಲ ರೀತಿಯಲ್ಲಿ ಸಿದ್ಧತೆ ಕೈಗೊಂಡಿದ್ದು ಮತದಾನ ಪ್ರಕ್ರಿಯೆಗೆ 1362 ಸಿಬ್ಬಂದಿಯನ್ನು ನೇಮಿಸಿ ಅಗತ್ಯ ತರಬೇತಿ ನೀಡಲಾಗಿದೆ ಎಂದು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಆರ್‌.ಸುಮಾತಿಳಿಸಿದರು.

Advertisement

ವಿಶೇಷ ಮತಗಟ್ಟೆಗಳು: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಒಟ್ಟು 230 ಮತಗಟ್ಟೆಗಳಲ್ಲಿ 2 ಪಿಂಕ್‌ ಮತಗಟ್ಟೆ, 1 ಗಿರಿಜನ ಶೈಲಿಯ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ. 56 ಮತಗಟ್ಟೆಗಳನ್ನು ಕ್ರಿಟಿಕಲ್‌ ಎಂದು ಗುರುತಿಸಲಾಗಿದೆ. ತಾಲೂಕಿನ ಕಂಪಲಾಪುರ ಮತ್ತು ಪಿರಿಯಾಪಟ್ಟಣದಲ್ಲಿ ಪಿಂಕ್‌ ಮತಗಟ್ಟೆ ತೆರೆಯಲಾಗುತ್ತಿದೆ. ಮತಗಟ್ಟೆಗಳಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ.

ಹಾಡಿ ಶೈಲಿ ಮತಗಟ್ಟೆ: ಬಹುತೇಕ ಹೆಚ್ಚಿನ ಗಿರಿಜನ ಮತದಾರರನ್ನೇ ಹೊಂದಿರುವ ಮುತ್ತೂರಿನ ರಾಜೀವ್‌ ಗ್ರಾಮ ಮತಗಟ್ಟೆಯಲ್ಲಿ ಗಿರಿಜನ ಹಾಡಿಯನ್ನು ಹೋಲುವ ಸಾಂಪ್ರದಾಯಕ ಮತಗಟ್ಟೆಯನ್ನು ತೆರೆಯಲಾಗುವುದು. 11 ಮತ ಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಅಂಚೆ ಮತದಾನ: ತಾಲೂಕಿನ 1105 ಸಿಬ್ಬಂದಿ ಅಂಚೆ ಮತದಾನಕ್ಕೆ ಅರ್ಜಿ ಪಡೆದಿದ್ದು ಅವರಲ್ಲಿ ಈಗಾಗಲೇ 605 ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಅಂಚೆ ಮತದಾನಕ್ಕಾಗಿ ತಾಲೂಕು ಕಚೇರಿಯಲ್ಲಿಯೂ ವ್ಯವಸ್ಥೆ ಮಾಡಲಾಗಿದ್ದು ಮೇ 12ರಂದು ಸಂಜೆ 6ರವರೆಗೆ ಸಮಯ ನೀಡಲಾಗಿದೆ ಎಂದು ಹೇಳಿದರು. 

ಮದ್ಯ ನಿಷೇಧ: ಮೇ10ರಂದು ಸಂಜೆ 6ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ಮತ್ತು ಮೇ 14ರ ಮಧ್ಯರಾತ್ರಿಯಿಂದ ಮೇ 15ರ ಮಧ್ಯರಾತ್ರಿವರೆಗೆ ಎಲ್ಲಾ ವಿಧದ ಮದ್ಯದ ಅಂಗಡಿಗಳನ್ನು ಮುಚ್ಚಲಾಗುವುದು. ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯನ್ನು ನಿಷೇಧಿಸಿ “ಒಣ ದಿನ” ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next